ಟಿಕೆಟ್ ಇಲ್ಲದೆ ಪ್ರಯಾಣ ಬೆಳೆಸಿದ್ದ ಪಾರಿವಾಳಗಳಿಗೆ 900 ರೂ. ದಂಡ ಹಾಕಿದ ಕೆಎಸ್ ಆರ್ ಟಿಸಿ

ಗುರುವಾರ, 20 ಜೂನ್ 2019 (12:48 IST)
ಬೆಂಗಳೂರು : ಕೆಎಸ್ ಆರ್ ಟಿಸಿ ಬಸ್ ನಲ್ಲಿ ಟಿಕೆಟ್ ತೆಗೆದುಕೊಳ್ಳದೆ ಪ್ರಯಾಣ ಬೆಳೆಸಿದ್ದಕ್ಕೆ ಪಾರಿವಾಳಗಳಿಗೆ 900 ರೂ. ದಂಡ ಹಾಕಲಾಗಿದೆ.




ಲಿಂಗಸೂರುನಿಂದ ರಾಯಚೂರುಗೆ ಪ್ರಯಾಣ ಬೆಳೆಸಿದ್ದ ವ್ಯಕ್ತಿಯೊಬ್ಬರು, ಒಂದ್ ಬಾಕ್ಸ್ ನಲ್ಲಿ ಪಾರಿವಾಳಗಳನ್ನು ಹಿಡಿದುಕೊಂಡಿದ್ದರು. ಅವರು ಆ  ಪಾರಿವಾಳಗಳಿಗೆ ಟಿಕೆಟ್ ತೆಗೆದುಕೊಂಡಿರಲಿಲ್ಲ.ಅದಕ್ಕಾಗಿ ಚೆಕ್ಕಿಂಗ್ ಮಾಡಲು ಬಂದ ಇನ್ಸ್ ಪೆಕ್ಟರ್ ಒಂದು ಬಾಕ್ಸ್ ಪಾರಿವಾಳಗಳಿಗೆ ಭರ್ತಿ 900 ರೂ. ದಂಡ ಹಾಕಿದ್ದಾರೆ.


ಈ ಹಿಂದೆ ಕೋಳಿಗಳಿಗೆ ಟಿಕೆಟ್ ತೆಗೆದುಕೊಂಡಿಲ್ಲ ಎಂದು ಪ್ರಯಾಣಿಕನೊಬ್ಬನಿಗೆ 100 ರೂ. ದಂಡ ಹಾಕಿದ್ದ ಕೆಎಸ್‍ಆರ್ ಟಿಸಿ ಇದೀಗ ಪಾರಿವಾಳಗಳಿಗೆ 900 ರೂ ದಂಡ ವಿಧಿಸಿರುವುದು ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ