ಯಡಿಯೂರಪ್ಪಗೆ ಫುಲ್ ಶಹಬ್ಬಾಶ್ ಗಿರಿ ಕೊಟ್ಟ ಪ್ರಧಾನಿ ಮೋದಿ

ಬುಧವಾರ, 2 ಮೇ 2018 (09:31 IST)
ಚಿಕ್ಕೋಡಿ: ಇಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ಮೋದಿ ಭರ್ಜರಿ ಭಾಷಣ ಮಾಡಿದ್ದು, ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪಗೆ ಭಾರೀ ಪ್ರಶಂಸೆ ನೀಡಿದ್ದಾರೆ.

ರೈತರೇನು? ಅವರ ಸಮಸ್ಯೆಗಳೇನು ಎಂಬುದು ಯಡಿಯೂರಪ್ಪಗೆ ಚೆನ್ನಾಗಿ ಗೊತ್ತಿದೆ. ಹೀಗಾಗಿ ರೈತರ ಕಷ್ಟಗಳನ್ನು ಪರಿಹಾರ ಮಾಡಬೇಕೆಂದರೆ ಬಿಜೆಪಿಗೆ ಮತ ನೀಡಿ ಎಂದು ಪ್ರಧಾನಿ ಮೋದಿ ಆಗ್ರಹಿಸಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ಮೇಲೆ ಹರಿಹಾಯ್ದ ಪ್ರಧಾನಿ ಮೋದಿ, ಕಾಂಗ್ರೆಸ್ ನಿರಂತರವಾಗಿ ರೈತರನ್ನು ಅವಗಣಿಸುತ್ತಲೇ ಇದೆ. ರೈತರ ಸಮಸ್ಯೆಗಳಿಗೆ ಕಾಂಗ್ರೆಸ್ ಬೆಲೆ ಕೊಡಲೇ ಇಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ