ಗೌರಿ ಹತ್ಯೆ ಆರೋಪವನ್ನು ಬಲವಂತವಾಗಿ ಆರೋಪಿ ಮೇಲೆ ಹೊರಿಸಿದ್ದಾರಾ ಪೊಲೀಸರು?!

ಶುಕ್ರವಾರ, 9 ಮಾರ್ಚ್ 2018 (13:36 IST)
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಆರೋಪಿ ನವೀನ್ ಕುಮಾರ್ ಗೆ ಬಲವಂತವಾಗಿ ಕೃತ್ಯದ ಆರೋಪ ಒಪ್ಪಿಕೊಳ್ಳುವಂತೆ ಮಾಡಲಾಗಿದೆಯೇ?

ಹಾಗಂತ ಆರೋಪಿ ಪರ ವಕೀಲರು ವಾದಿಸಿದ್ದಾರೆ. ಈಗಾಗಲೇ ಕೋರ್ಟ್ ಗೆ ಆರೋಪಿ ವಿಚಾರಣೆಯ ಅಡಿಯೋ ಮತ್ತು ವಿಡಿಯೋ ರೆಕಾರ್ಡಿಂಗ್ ಸಲ್ಲಿಸಲಾಗಿದೆ ಎಂದು ಆರೋಪಿ ಪರ ವಕೀಲರು ಹೇಳಿದ್ದಾರೆ.

ಇಷ್ಟು ದಿನ ಕಾಲ ಪೊಲೀಸರು ತಮ್ಮ ಕಸ್ಟಡಿಯಲ್ಲಿಟ್ಟುಕೊಂಡು ಆರೋಪಿಗೆ ಹಿಂಸೆ ನೀಡಿ ತಪ್ಪೊಪ್ಪಿಕೊಳ್ಳುವಂತೆ ಮಾಡಿದ್ದಾರೆ. ವಿಚಾರಣೆ ನೆಪದಲ್ಲಿ 18 ದಿನಕ್ಕೂ ಹೆಚ್ಚು ಕಾಲ ಹಿಂಸೆ ನೀಡಿದ್ದಾರೆ. ಇದಕ್ಕಿಂತ ಹೆಚ್ಚು ಗುಂಡಿಕ್ಕಿ ಕೊಲ್ಲುವುದು ಒಳ್ಳೆಯದಿತ್ತು ಎಂದು ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ