ಸಬ್ ಇನ್ಸಪೆಕ್ಟರ್ ವಿಚ್ಛೇದಿತ ಪತ್ನಿ ಹತ್ಯೆ

ಭಾನುವಾರ, 5 ಜೂನ್ 2016 (15:46 IST)
ಹೊಸದುರ್ಗ ಪೊಲೀಸ್ ಠಾಣೆ ಪಿಎಸ್​ಐ ಗಿರೀಶ್ ಅವರ ವಿಚ್ಛೇದಿತ ಪತ್ನಿ ಪ್ರಫುಲ್ಲಾ  ಪತ್ನಿಯನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆಗೈದ ಘಟನೆ ಗುಬ್ಬಿ ತಾಲ್ಲೂಕಿನ ಸಂಗನಹಳ್ಳಿಯಲ್ಲಿ ನಡೆದಿದೆ
 
ಶನಿವಾರ ರಾತ್ರಿ ಅವರು ಸ್ಕೂಟಿಯಲ್ಲಿ ಸಂಬಂಧಿಕರ ಮನೆಗೆ ತೆರಳಿ ವಾಪಸ್ಸಾಗುತ್ತಿದ್ದಾಗ ಅಪರಿಚಿತ ದುಷ್ಕರ್ಮಿಗಳು ಪ್ರಫುಲ್ಲಾ(26) ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. 
 
ದಂಪತಿ ನಡುವೆ ಮನಸ್ತಾಪ ಬಂದಿದ್ದರಿಂದ ಎರಡು ವರ್ಷಗಳ ಹಿಂದೆ ಅವರು ಬೇರೆಯಾಗಿದ್ದರು. ಬಳಿಕ ಪ್ರಫುಲ್ಲಾ ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ಸಂಗನಹಳ್ಳಿಗೆ(ತವರು ಮನೆ) ಬಂದು ನೆಲೆಸಿದ್ದರು.
 
ಅನೈತಿಕ ಸಂಬಂಧವೇ ಹತ್ಯೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
 
ಚೇಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ