ನಾಗರಾಜನಿಗಾಗಿ ತಮಿಳುನಾಡಿನಲ್ಲಿ ಪೊಲೀಸರ ಹುಡುಕಾಟ

ಭಾನುವಾರ, 16 ಏಪ್ರಿಲ್ 2017 (10:53 IST)
ನಾಗರಾಜ ತಮಿಳುನಾಡಿನಲ್ಲಿ ಅಡಗಿದ್ದಾನೆ ಎನ್ನುವ ಸುಳಿವು ಪಡೆದಿರುವ ಪೊಲೀಸರು ಧರ್ಮಪುರಿ, ಕಾಟ್‌ಪಾಡಿ ಸೇರಿದಂತೆ ಇತರ ಜಿಲ್ಲೆಗಳಲ್ಲಿ ವ್ಯಾಪಕ ಹುಡುಕಾಟ ನಡೆಸಿದ್ದಾರೆ.
 
ಪೊಲೀಸರು ನಡೆಸಿದ ದಾಳಿಯಲ್ಲಿ ನಾಗರಾಜನ ಮನೆಯಲ್ಲಿ 15 ಕೋಟಿಗೂ ಹೆಚ್ಚು ಹಳೆನೋಟುಗಳು ಸೇರಿದಂತೆ 150 ಕೋಟಿ ರೂಪಾಯಿಗಳ ಮೌಲ್ಯದ ಆಸ್ತಿಪಾಸ್ತಿ ದಾಖಲೆಗಳು ಪತ್ತೆಯಾಗಿದ್ದವು.
 
ಕೆಲ ಮೂಲಗಳ ಪ್ರಕಾರ, ಬಾಂಬ್‌ನಾಗ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ ಶರಣಾಗಲು ಕೆಲವು ದಿನಗಳ ಕಾಲ ಸಮಯ ಅವಕಾಶ ಕೇಳಿದ್ದಾನೆ ಎನ್ನಲಾಗಿದೆ. ಜಾಮೀನು ಪಡೆದು ಬೆಂಗಳೂರಿಗೆ ಬರಲು ಪ್ಲ್ಯಾನ್ ರೂಪಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.
 
ಉದ್ಯಮಿ ಉಮೇಶ್ ಎನ್ನುವವರನ್ನು ಅಪಹರಿಸಿ 50 ಲಕ್ಷ ರೂಪಾಯಿ ಹಣ ವಸೂಲಿ ಮಾಡಿರುವ ಬಗ್ಗೆ ಬಾಂಬ್‌ನಾಗನ ವಿರುದ್ಧ ದೂರು ದಾಖಲಾಗಿತ್ತು. ದೂರು ಆಧರಿಸಿ ಪೊಲೀಸರು ಬಾಂಬ್‌ನಾಗನ ನಿವಾಸದ ಮೇಲೆ ದಾಳಿ ನಡೆಸಿದಾಗ ಕಂತೆ ಕಂತೆ ಹಣ ಪತ್ತೆಯಾಗಿದ್ದನ್ನು ಸ್ಮರಿಸಬಹುದು.    
 
  ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ