ಚಾಮರಾಜನಗರಕ್ಕೆ ಕೇಂದ್ರ ಆರೋಗ್ಯ ಸಚಿವರಿಂದ ಪ್ರಶಂಸೆ

ಶುಕ್ರವಾರ, 5 ಜೂನ್ 2020 (09:03 IST)
ಚಾಮರಾಜನಗರ : ಚಾಮರಾಜನಗರಕ್ಕೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಶಹಬ್ಬಾಶ್ ಗಿರಿ ನೀಡಿದ್ದಾರೆ.


ಚಾಮರಾಜನಗರ ರಾಜ್ಯಕ್ಕೆ ಏಕೈಕ ಗ್ರೀನ್ ಝೋನ್ ಜಿಲ್ಲೆಯಾಗಿದ್ದು, ಈ ಕಾರಣದಿಂದ ಚಾಮರಾಜನಗರ ಜಿಲ್ಲಾಡಳಿತ, ಜನತೆಗೆ ಪ್ರಶಂಸೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಫೋನ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.


ಉತ್ತಮ ಕೆಲಸ  ನಿರ್ವಹಿಸುತ್ತಿದ್ದೀರಿ. ಜಿಲ್ಲೆಯ ಸುತ್ತ ಹಾಟ್ ಸ್ಪಾಟ್ ಕೇಂದ್ರಗಳಿವೆ. ಜಿಲ್ಲೆಯ ಸೋಂಕು ಹರಡದಂತೆ ಉತ್ತಮ ಕ್ರಮ ಕೈಗೊಂಡಿದ್ದೀರಿ ಎಂದು ಚಾಮರಾಜನಗರ ಜಿಲ್ಲಾಡಳಿತ, ಜನತೆಯನ್ನು ಕೇಂದ್ರ ಸಚಿವ ಡಾ.ಹರ್ಷವರ್ಧನ್ ಶ್ಲಾಘನಿಸಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ