ಸೆಂಟ್ರಲ್ ನಿಂದ ಪ್ರಕಾಶ್ ರೈ ಸ್ಪರ್ಧೆ; ಸಂಸದ ಹಿಂದೇಟು ಹಾಕಿದ್ದು ಏಕೆ?

ಶನಿವಾರ, 23 ಫೆಬ್ರವರಿ 2019 (15:10 IST)
ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಿಂದ ಪ್ರಕಾಶ್ ರೈ ಸ್ಪರ್ಧೆ ಮಾಡುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ನಡುವೆ ಬೆಂಗಳೂರು ಕೇಂದ್ರದ ಹಾಲಿ ಬಿಜೆಪಿ ಸಂಸದ ಪಿ.ಸಿ.ಮೋಹನ್ ಹೇಳಿಕೆ ಈ ಕುರಿತು ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗೆ ಯಾರು ಬೇಕಾದ್ರು ಸ್ಪರ್ಧೆ ಮಾಡಬಹುದು. ಅದೇ ರೀತಿ ನೀವು ಹೇಳಿದ ವ್ಯಕ್ತಿಯು ಸ್ಪರ್ಧೆ ಮಾಡಬಹುದು ಎಂದು ಪ್ರಕಾಶ್ ರೈ ಹೆಸರು ಉಲ್ಲೇಖಿಸದೆ ಪ್ರತಿಕ್ರಿಯಿಸಿದ್ದಾರೆ ಪಿಸಿ ಮೋಹನ್.

ನಾನು 5 ವರ್ಷ ಸಂಸದನಾಗಿ ಮಾಡಿದ ಕಾರ್ಯಗಳು ಹಾಗೂ ಪ್ರಧಾನಿ ಮೋದಿ ಸಾಧನೆಗಳ ಮೂಲಕ ಪ್ರಚಾರ ನಡೆಸುತ್ತೇನೆ ಎಂದರು.

ಪ್ರಕಾಶ್ ರೈ ಹೆಸರು ಹೇಳಲು ಇಚ್ಛಿಸದ ಪಿಸಿ ಮೋಹನ್, ಪ್ರಕಾಶ್ ರೈ ಸ್ಪರ್ಧೆ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ