ರೇವತಿಯನ್ನು ಚಾಮುಂಡೇಶ್ವರಿ ನಮ್ಮ ಮನೆಗೆ ಕಳುಹಿಸಿದ ಪ್ರಸಾದ: ಸೊಸೆ ಗುಣಗಾನ ಮಾಡಿದ ಕುಮಾರಸ್ವಾಮಿ
ಈ ವಿಷಯ ಗಮನಕ್ಕೆ ಬಂದ ಕೂಡಲೇ ಕ್ಷಣಕಾಲ ಭಾವುಕರಾದ ಹೆಚ್ ಡಿ ಕುಮಾರಸ್ವಾಮಿ ಅದು ಕೋವಿಡ್ ಸಮಯ ನಿಖಿಲ್ ಕುಮಾರಸ್ವಾಮಿ ಮದುವೆ ನಡೆಯಿತು. ಮಗನ ಮದುವೆಯಲ್ಲಿ ರಾಮನಗರ ಚನ್ನಪಟ್ಟಣ, ಮಂಡ್ಯ ಭಾಗದ ಎಲ್ಲಾ ಜನತೆಗೆ ಊಟ ಹಾಕಿಸಬೇಕೆಂಬ ಮಹಾದಾಸೆ ನನಗಿತ್ತು. ಆದರೆ ಕೊರೊನಾ ಕಾರಣಕ್ಕೆ ಅದು ಸಾಧ್ಯ ಆಗಲಿಲ್ಲ. ಆ ಬಗ್ಗೆ ನಮ್ಮ ಕುಟುಂಬಕ್ಕೆ ಅತೀವ ನೋವಿದೆ ಎಂದು ಹೇಳಿದರು.