2ನೇ ಹಂತದ ನೆರೆ ಪರಿಹಾರ ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ

ಸೋಮವಾರ, 6 ಜನವರಿ 2020 (19:27 IST)

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ರಾಜ್ಯಕ್ಕೆ ನೆರೆ ಪರಿಹಾರ ಬಿಡುಗಡೆಗೊಳಿಸಿದೆ.
 

ಕರ್ನಾಟಕಕ್ಕೆ 1869.85 ಕೋಟಿ ರೂ. ನೆರೆ ಪರಿಹಾರ ಬಿಡುಗಡೆಗೊಳಿಸಲಾಗಿದೆ. ಎನ್ ಡಿ ಆರ್ ಎಫ್ ಅಡಿಯಲ್ಲಿ ಎರಡನೇ ಹಂತದಲ್ಲಿ ಈ ಪರಿಹಾರ ಬಂದಿದೆ.

ಈ ಹಿಂದೆ ಮೊದಲನೇ ಹಂತದಲ್ಲಿ 1200 ಕೋಟಿ ರೂ. ಬಂದಿದ್ದು, ಇದೀಗ 1869.85 ಕೋಟಿ ರೂ. ಬಿಡುಗಡೆಗೊಂಡಿದೆ. ಒಟ್ಟು 3069.85 ಕೋಟಿ ನೆರೆ ಪರಿಹಾರ ಬಂದಂತೆ ಆಗಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ