ಯಡಿಯೂರಪ್ಪ ಅವರನ್ನ ಮೂಲೆಗುಂಪು ಮಾಡಿದ್ದಾರೆ-ಪ್ರಿಯಾಂಕ ಖರ್ಗೆ

ಭಾನುವಾರ, 29 ಜನವರಿ 2023 (17:48 IST)
ಯಡಿಯೂರಪ್ಪ ಸಿನಿಯರ್ ಲೀಡರ್, ಪಾಪ ಅವರನ್ನು ಮೂಲೆಗುಂಪು ಮಾಡಿದ್ದಾರೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ. ಕೋಲಾರದಿಂದ ಸಿದ್ದರಾಮಯ್ಯ ಓಡಿ ಹೋಗ್ತಾರೆ ಎಂಬ ಯಡಿಯೂರಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಯಾರ ಎಲ್ಲಿಂದ ಓಡಿ ಹೊಗ್ತಾರೆ ಅಂತ ಬಿಜೆಪಿ ಏನಾಗಬೇಕಿದೆ.ಯಡಿಯೂರಪ್ಪ ಸಿನಿಯರ್ ಲೀಡರ್ ಇದ್ದಾರೆ ಪಾಪ ಅವರನ್ನು ಮೂಲೆಗುಂಪು ಮಾಡಿದ್ದಾರೆ. ವಿಜಯೆಂದ್ರ ಅವರ ಭಾವನೆ ವ್ಯಕ್ತಪಡಿಸಿದ್ದಾರೆ.ಯಡಿಯೂರಪ್ಪ ಕಡಗಣನೆ ಮಾಡಿದ್ರೆ ಹೊಡೆತ ಬಿಳುತ್ತೆ ಅಂತ ಹೆಳಿದ್ದಾರೆ.ಬಿಜೆಪಿ ನಾಯಕರಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ.ಅದಕ್ಕಾಗಿ ಕೇಂದ್ರ ನಾಯಕರು ರಾಜ್ಯಕ್ಕೆ ಬರ್ತಾ ಇದ್ದಾರೆ ಎಂದು ವಾಗ್ದಾಳಿ ನಡೆಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ