ಪಾದರಾಯನಪುರದಲ್ಲಿ ನಿಷೇಧಾಜ್ಞೆ ತೆರವು; ಸಹಜ ಸ್ಥಿತಿಗೆ ಮರಳಿದ ಜನಜೀವನ

ಭಾನುವಾರ, 14 ಜೂನ್ 2020 (10:09 IST)
ಬೆಂಗಳೂರು : ಪಾದರಾಯನಪುರದಲ್ಲಿ ನಿಷೇಧಾಜ್ಞೆ ತೆರವುಗೊಳಿಸಿದ್ದು, ಸ್ಥಳೀಯ ಜನ ಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.

ಪಾದರಾಯನಪುರದಲ್ಲಿ ನಿಷೇಧಾಜ್ಞೆ ತೆರವುಗೊಳಿಸಿದ ಹಿನ್ನಲೆಯಲ್ಲಿ ಆಟೋ, ವಾಹನ ರಸ್ತೆಗಿಳಿದಿದ್ದು,  ವ್ಯಾಪಾರ ವಹಿವಾಟಿನಲ್ಲಿ ಜನ ತೊಡಗಿಕೊಂಡಿದ್ದಾರೆ.

ಪಾದರಾಯನಪುರ ಕಾರ್ಪೋರೇಟರ್ ಇಮ್ರಾನ್ ಪಾಷಾ ಡಿಸ್ಚಾರ್ಜ್ ವೇಳೆ ಜನ ಜಮಾವಣೆಯಾಗಿದ್ದು. ಈ ಹಿನ್ನಲೆಯಲ್ಲಿ ಪಾದರಾಯನಪುರದಲ್ಲಿ ಜೂನ್ 7ರಿಂದ 144 ಸೆಕ್ಷನ್ ಜಾರಿಗೊಳಿಸಲಾಗಿತ್ತು. ಇಂದು ಪೊಲೀಸರು.144 ಸೆಕ್ಷನ್ ತೆರವುಗೊಳಿಸಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ