ಕರುವಿನ ಜೀವ ಉಳಿಸಿದ ಪಿ ಎಸ್ ಐ

ಬುಧವಾರ, 17 ಜೂನ್ 2020 (14:35 IST)
ಪೊಲೀಸ್ ಠಾಣೆಯ ಪಿ ಎಸ್ ಐ ಒಬ್ಬರು ಕರುವಿನ ಪ್ರಾಣ ರಕ್ಷಿಸಿ ಮಾದರಿಯಾಗಿದ್ದಾರೆ.

ರಸ್ತೆಯಲ್ಲಿ ಬಿದ್ದು ನರಳುತ್ತಿದ್ದ ಹಸುವಿನ ಕರುವನ್ನು ರಕ್ಷಿಸಿದ್ದಾರೆ ಕಿಕ್ಕೇರಿ ಪೊಲೀಸ್ ಠಾಣೆಯ ಪಿ.ಎಸ್.ಐ ನವೀನ್.

ಕೃಷ್ಣರಾಜಪೇಟೆ ತಾಲ್ಲೂಕಿನ ಬೀರನಹಳ್ಳಿ ರಸ್ತೆಯಲ್ಲಿ ಗೋ ಸಾಗಾಣಿಕೆಗಾರರು ಅಕ್ರಮವಾಗಿ ಹಸುವಿನ ಕರುಗಳನ್ನು ಸಾಗಾಣಿಕೆ ಮಾಡಿಕೊಂಡು ಹೋಗುವಾಗ ಆಕಸ್ಮಿಕವಾಗಿ ರಸ್ತೆಯಲ್ಲಿ ಬಿದ್ದು ಗಾಯಗಳಾಗಿದ್ದ ಕರುವನ್ನು ಸಾರ್ವಜನಿಕರು ತಂದು ಕಿಕ್ಕೇರಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಆಹಾರ ಇಲ್ಲದೆ ಗಾಯಗೊಂಡ ಕರುವನ್ನು ಕಿಕ್ಕೇರಿ ಠಾಣೆಯ ಪಿ.ಎಸ್.ಐ ನವೀನ್ ಮತ್ತು ಸಿಬ್ಬಂದಿಗಳು ಹಾಲು ಮತ್ತು ನೀರು ಕುಡಿಸಿ ಮಾನವೀಯತೆ ಮೆರೆದಿದ್ದು, ಗೋ ಸಾಗಾಣಿಕೆ ಜಾಲವನ್ನು ಪತ್ತೆ ಹಚ್ಚಲು ಪಣ ತೊಟ್ಡಿದ್ದಾರೆ. ಕರುವನ್ನು ಆರೋಗ್ಯ ತಪಾಸಣೆ ನಡೆಸಿ  ಸಮೀಪದ ಗೋ ಶಾಲೆಗೆ ಕಳಿಸಿಕೊಡಲಾಗಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ