ಬೆಂಗಳೂರಲ್ಲಿ ರಾಜಾಕಾಲುವೆಗೆ ಮತ್ತೊಬ್ಬ ಬಾಲಕ ಬಲಿ

ಗುರುವಾರ, 2 ಮಾರ್ಚ್ 2017 (10:35 IST)
ಬೆಂಗಳೂರಿನಲ್ಲಿ ರಾಜಾಕಾಲುವೆಗೆ ಮತ್ತೊಂದು ಬಲಿಯಾಗಿದೆ. ಶೌಚಕ್ಕೆ ಹೋದ ಬಾಲಕ ರಾಜಾಕಾಲುವೆಗೆ ಬಿದ್ದು ಮೃತಪಟ್ಟಿರುವ ಘಟನೆ ಬೆಂಗಳೂರಿನ ನಾಗದೇವನಹಳ್ಳಿ ಬಳಿ ನಡೆದಿದೆ. ಮೃತ ಬಾಲಕನನ್ನ ರಾಕೇಶ್ ಎಂದು ಗುರ್ತಿಸಲಾಗಿದೆ.


ರಾಕೇಶ್ ಕಲಬುರಗಿ ಮೂಲದ ಗಾರೆ ಕೆಲಸ ಮಾಡುತ್ತಿದ್ದ ಭೀಮರಾಯ್ ಮತ್ತು ನಾಗಮ್ಮ ಮಗನಾಗಿದ್ದು, ನಿನ್ನೆ ಸಂಜೆ ಶೌಚಕ್ಕೆ ಹೋದ ಮಗ ಎಷ್ಟು ಹೊತ್ತಾದರೂ ವಾಪಸ್ ಬರದಿದ್ದಾಗ ತಂಕಗೊಮಡ ಪೋಷಕರು ರಾಜಾಕಾಲುವೆ ತೆರಳಿ ನೋಡಿದಾಗ ಮಗ ರಾಜಾಕಾಲುವೆಗೆ ಬಿದ್ದು ಮೃತಪಟ್ಟಿರುವುದು ತಿಳಿದುಬಂದಿದೆ.

ಬಿಬಿಎಂಪಿ ವತಿಯಿಂದ ಮೃತನ ಕುಟುಂಬಕ್ಕೆ 1 ಲಕ್ಷ ಪರಿಹಾರ ಘೋಷಿಸಲಾಗಿದೆ. 

ವೆಬ್ದುನಿಯಾವನ್ನು ಓದಿ