ಜಮೀರ್ ಹೇಳಿಕೆಗೆ ಆರ್ ಅಶೋಕ್ ಟಾಂಗ್

ಶನಿವಾರ, 27 ಆಗಸ್ಟ್ 2022 (21:00 IST)
ಗಣೇಶೋತ್ಸವ ಅವಕಾಶ ಕೊಡಲ್ಲ ಎಂದಿದ್ದ  ಜಮೀರ್ ಹೇಳಿಕೆ ವಿಚಾರಕ್ಕೆ ಆರ್ ಅಶೋಕ್ ಟಾಂಗ್ ಕೊಟ್ಟಿದ್ದಾರೆ.75 ವರ್ಷಗಳಿಂದ ವಿರೋಧ ಮಾಡ್ತಾ ಇದ್ದಾರೆ‌.ಕೋಳಿ ಮಸಾಲೆ ಹರಿಯಬೇಕಾ?ಸರ್ಕಾರ ಮುಂದೆ ಸೂಕ್ತ ನಿರ್ಧಾರ ತೆಗೆದುಕೊಳುತ್ತದೆ ಎಂದು ಹೇಳಿದ್ದಾರೆ.
ಇನ್ನು ಗಣೇಶ ಹಬ್ಬಕ್ಕೆ ಸಂಬಂಧಿಸಿದಂತೆ ಕಂದಾಯ, ಬಿಬಿಎಂಪಿ ಹಾಗೂ ಪೊಲೀಸ್ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ.ಕೋರ್ಟ್ ಆದೇಶಗಳನ್ನ ಕೂಡ ಪರಿಶೀಲನೆ ಮಾಡಲಾಯ್ತು.ಎಜಿ ಜೊತೆ ಕೂಡ ಮಾತನಾಡಿದ್ದೇವೆ.ಪೊಲೀಸ್ ಇಲಾಖೆ ಬಂದೋಬಸ್ತ್ ಬಗ್ಗೆ ಅವರು ಕೂಡ ಅಭಿಪ್ರಾಯ ವ್ಯಕ್ತಪಡಿಸಿದಾರೆ.ಐದು ಅರ್ಜಿಗಳನ್ನ ಪರಿಶೀಲನೆ ಮಾಡಿದ್ದೇವೆ.೨ ಅರ್ಜಿಗಳು ಮಾತ್ರ ಲೋಕಲ್ ನವರು ಕೊಟ್ಟಿದ್ದಾರೆ.ಇನ್ನು ೨ ದಿನ ಅರ್ಜಿ ಕೊಡೋಕೆ ಅವಕಾಶ ಕೊಡುತ್ತೇವೆ.ಮುಸ್ಲಿಂ ಸಂಘಟನೆಗಳು ಈ ಮೈದಾನಕ್ಕೋಸ್ಕರ ಫೈಟ್ ಮಾಡ್ತಿದ್ದಾರೋ ಅವರು ಸುಪ್ರೀಂಕೋರ್ಟ್ ಗೆ ಸೋಮವಾರ ಅಪೀಲ್ ಹೋಗ್ತಾರೆ ಅನ್ನೋ ಮಾಹಿತಿ ಇದೆ.ಹೀಗಾಗಿ ಸಾರ್ವಜನಿಕರಿಗೆ ಹೇಳ್ತಿದ್ದೇನೆ ಅರ್ಜಿ ಹಾಕೋರು ಹಾಕಬಹುದು.ನಾನು ಕಂದಾಯ ಸಚಿವನಾಗಿ ಆಮೇಲೆ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಆರ್ ಅಶೋಕ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ