ಪೌರ ಕಾರ್ಮಿಕರಿಗೆ ಏನು ಬೇಕು ಕೇಳಿ ಕೊಡ್ತೇವೆ ಎಂದರು ರಾಹುಲ್ ಗಾಂಧಿ!

ಭಾನುವಾರ, 8 ಏಪ್ರಿಲ್ 2018 (13:20 IST)
ಬೆಂಗಳೂರು: ಜನಾಶೀರ್ವಾದ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಬಂದಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪೌರ ಕಾರ್ಮಿಕರ ಜತೆಗೆ ಸಂವಾದ ನಡೆಸಿದರು.

ಈ ವೇಳೆ ಜಯಮ್ಮ ಎಂಬ ಪೌರ ಕಾರ್ಮಿಕ ಮಹಿಳೆ ಸಿಎಂ ಸಿದ್ದರಾಮಯ್ಯ ಸರ್ಕಾರದ ಸಾಧನೆಗಳನ್ನು ಹೊಗಳಿದ್ದಲ್ಲದೆ, ಸಮಸ್ಯೆಗಳನ್ನೂ ಹೇಳಿಕೊಂಡರು.

ಈ ವೇಳೆ ಮಾತನಾಡಿದ ರಾಹುಲ್ ಗಾಂಧಿ ನಿಮ್ಮ ಕಷ್ಟ ಕೇಳಲೆಂದೇ ಬಂದಿದ್ದೇನೆ. ಏನು ಸಹಾಯ ಬೇಕು ಕೇಳಿ. ಮಾಡಿಸಿಕೊಡುತ್ತೇವೆ ಎಂದು ಅಭಯ ನೀಡಿದರು. ಈ ವೇಳೆ ಪೌರ ಕಾರ್ಮಿಕರನ್ನೂ ಎಂಎಲ್ ಸಿ ಮಾಡಿ ಎಂಬ ಕೂಗು ಕೇಳಿಬಂದಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ