ಪ್ರಣಾಳಿಕೆ ಬಿಡುಗಡೆ ಮಾಡುವಾಗ ಹಿರಿಯ ನಾಯಕ ಜನಾರ್ಧನ ಪೂಜಾರಿಗೆ ವಿಶೇಷ ಗೌರವ ಕೊಟ್ಟ ರಾಹುಲ್ ಗಾಂಧಿ

ಶುಕ್ರವಾರ, 27 ಏಪ್ರಿಲ್ 2018 (11:12 IST)
ಮಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಇದೀಗ ಮೂಲ ಕಾಂಗ್ರೆಸ್ಸಿಗರು ಮೂಲೆಗುಂಪಾಗುತ್ತಿದ್ದಾರೆ ಎಂಬ ಅಳಲು ಕೇಳಿಬರುತ್ತಿರುವಂತೆಯೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಿರಿಯ ನಾಯಕ ಜನಾರ್ಧನ ಪೂಜಾರಿಗೆ ವಿಶೇಷ ಗೌರವ ಕೊಟ್ಟಿದ್ದಾರೆ.

ಟಿಎಂಎ ಪೈ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಪ್ರಣಾಳಿಕೆ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಜನಾರ್ಧನ ಪೂಜಾರಿ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಪ್ರಣಾಳಿಕೆ ತಯಾರಿ ತಂಡದ ಮುಖ್ಯಸ್ಥ ವೀರಪ್ಪ ಮೊಯಿಲಿ ಹೊತ್ತಗೆಯನ್ನು ರಾಹುಲ್ ಗಾಂಧಿ ಕೈಗಿಡುತ್ತಿದ್ದಂತೇ ರಾಹುಲ್, ತಮಗಿಂತ ಸ್ವಲ್ಪ ದೂರದಲ್ಲಿ ನಿಂತಿದ್ದ ಜನಾರ್ಧನ ಪೂಜಾರಿಯವರನ್ನು ಕರೆದು ತಮಗಿತ್ತ ಪ್ರಣಾಳಿಕೆಯನ್ನು ಅವರ ಕೈಗಿತ್ತರು. ಬಳಿಕ ತಾವು ಇನ್ನೊಂದು ಹೊತ್ತಗೆಯನ್ನು ಕೈಯಲ್ಲಿ ಹಿಡಿದು ಫೋಟೋಗೆ ಪೋಸ್ ನೀಡಿದರು.

ಕಳೆದ ಬಾರಿ ರಾಹುಲ್ ಮಂಗಳೂರಿಗೆ ಪ್ರವಾಸ ಮಾಡಿದ್ದಾಗ ಜನಾರ್ಧನ ಪೂಜಾರಿ ಭಾವುಕರಾಗಿ ರಾಹುಲ್ ರನ್ನು ಬಿಗಿದಪ್ಪಿದ್ದರು. ಈ ಸಂದರ್ಭದಲ್ಲಿ ರಾಹುಲ್ ಕೂಡಾ ಪೂಜಾರಿಯವರನ್ನು ಸಮಾಧಾನಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ