ಇಂದು ಮತ್ತು ನಾಳೆ ರಾಜಧಾನಿಯಲ್ಲಿ ಮಳೆಯಾಗುವ ಸಾಧ್ಯತೆ

ಬುಧವಾರ, 14 ಸೆಪ್ಟಂಬರ್ 2022 (20:42 IST)
ರಾಜ್ಯದಲ್ಲಿ ಇಂದು ಮತ್ತು ನಾಳೆ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಹೇಳಿದೆ. ನಿನ್ನೆ ಒಂದು ದಿನ ಬಹುತೇಕ ಭಾಗಗಳಲ್ಲಿ ವರುಣ ಅಬ್ಬರ ಶುರುವಗಿದ್ದು  ಮತ್ತೆ ತನ್ನ ಲಯಕ್ಕೆ ಮರಳಲಿರುವ ವರುಣ ದೇವ, ಅಬ್ಬರಿಸುವ ಸಾಧ್ಯತೆಗಳಿವೆ. ಇನ್ನು ಕೆಲವು ಭಾಗಗಳಲ್ಲಿ ಮಿಂಚು ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಗಳಿವೆ. ರಾಜಧಾನಿ ಬೆಂಗಳೂರಿನ ಜನರು 15 ದಿನಗಳಿಂದ ಸುರಿದ ಮಳೆಯಿಂದಾದ ಅನಾಹುತದಿಂದ ಇನ್ನು ಹೊರ ಬಂದಿಲ್ಲ. ಈ ನಡುವೆ ಮತ್ತು ಎರಡು  ದಿನ ಗಾರ್ಡನ್ ಸಿಟಿಯಲ್ಲಿ ಮಳೆಯಾಗುವ ಸಾಧ್ಯತೆಗಳಿವೆ ಎಂಬ ಆತಂಕದ ಮಾಹಿತಿಯನ್ನು ಹವಾಮಾನ ಇಲಾಖೆ ಹೇಳಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ