ಶಾಲೆ ಆವರಣಕ್ಕೂ ನುಗ್ಗಿದ ಮಳೆ ನೀರು

ಸೋಮವಾರ, 4 ಸೆಪ್ಟಂಬರ್ 2023 (17:03 IST)
ಯಾದಗಿರಿಯಲ್ಲಿ ಸತತ ಎರಡು ದಿನಗಳಿಂದ ಭಾರಿ ಮಳೆ ಸುರಿಯುತ್ತಿದ್ದು, ವರುಣನ ಅರ್ಭಟಕ್ಕೆ ಯಾದಗಿರಿಯ ಮುಖ್ಯರಸ್ತೆ ಸಂಪೂರ್ಣ ಜಲಾವೃತವಾಗಿದೆ.. ಇನ್ನು ವಿಜಯಪುರ to ಹೈದರಾಬಾದ್ ರಾಜ್ಯ ಹೆದ್ದಾರಿಯ ಸಂಚಾರವನ್ನ ಬಂದ್​​ ಮಾಡಲಾಗಿದೆ.. ಇನ್ನು ಭಾರಿ ಮಳೆಗೆ ದೋರನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಗೂ ಮಳೆ ನೀರು ನುಗ್ಗಿದೆ.. ಅಷ್ಟೆ ಅಲ್ಲದೇ ನೀರಿನ ರಭಸಕ್ಕೆ ಶಾಲಾ ಗೇಟ್ ಬಳಿ ಇದ್ದ ಬೃಹತ್ ಗಾತ್ರದ ತಗ್ಗು ಗುಂಡಿಗೆ ಮಳೆ ನೀರು ನುಗ್ಗಿದ ಪರಿಣಾಮ ಚರಂಡಿ ‌ನೀರಿನ ದುರ್ವಾಸನೆಗೆ ಗ್ರಾಮಸ್ಥರು ಬೇಸತ್ತಿದ್ದು,ಸಾಂಕ್ರಾಮಿಕ ರೋಗ ಎದುರಾಗುವ ಭೀತಿಯಲ್ಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ