ಇಂದು ಸಿಡಿ ಲೇಡಿ ಉಲ್ಲೇಖಿಸಿರುವ ಸ್ಥಳಗಳ ಮಹಜರು

ಗುರುವಾರ, 1 ಏಪ್ರಿಲ್ 2021 (09:41 IST)
ಬೆಂಗಳೂರು: ರಮೇಶ್ ಜಾರಕಿಹೊಳಿ ವಿರುದ್ಧ ಲೈಂಗಿಕ ದೌರ್ಜನ್ಯವೆಸಗಿದ ಯುವತಿ ನೀಡಿದ ಹೇಳಿಕೆ ಆಧಾರದಲ್ಲಿ ಇಂದು ಪೊಲೀಸರು ಸ್ಥಳ ಮಹಜರು ನಡೆಸಲಿದ್ದಾರೆ.


ವಿಚಾರಣೆ ವೇಳೆ ಯುವತಿ ಅಪಾರ್ಟ್ ಮೆಂಟ್ ನಲ್ಲಿ ತನ್ನ ಮೇಲೆ ಎರಡು ಬಾರಿ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂದು ಆರೋಪಿಸಿದ್ದಳು. ಅಲ್ಲದೆ, ರಮೇಶ್ ಜಾರಕಿಹೊಳಿ ಜೊತೆಗೆ ವಿಡಿಯೋ ಕಾಲ್ ಕೂಡಾ ನಡೆಸಿರುವುದನ್ನು ಒಪ್ಪಿಕೊಂಡಿದ್ದಳು.

ಹೀಗಾಗಿ ಯುವತಿ ನೀಡಿದ ಹೇಳಿಕೆ ಆಧಾರದಲ್ಲಿ ಅಪಾರ್ಟ್ ಮೆಂಟ್ ನ ಕೊಠಡಿ, ಅಲ್ಲಿರುವ ವಸ್ತುಗಳು, ಏನಾದರೂ ಸಾಕ್ಷ್ಯಗಳು ಸಿಗಲಿವೆಯೇ ಎಂದು ಪೊಲೀಸರು ಇಂದು ಸ್ಥಳ ಮಹಜರು ನಡೆಸಿ ತನಿಖೆ ನಡೆಸಲಿದ್ದಾರೆ. ಒಂದು ವೇಳೆ ಅಲ್ಲಿ ಏನಾದರೂ ವಸ್ತುಗಳು ಸಿಕ್ಕರೆ ಅದನ್ನು ಪರಿಶೀಲನೆಗೆ ರವಾನಿಸಲಾಗುತ್ತದೆ. ಈ ಮೂಲಕ ಯುವತಿ ಹೇಳಿದಂತೆ ದೌರ್ಜನ್ಯ ನಡೆದಿದೆಯೇ ಎಂಬುದು ಖಚಿತಪಡಿಸಿಕೊಳ್ಳಲಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ