ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಟಾಂಗ್ ಕೊಟ್ಟ ರಮ್ಯಾ

ಭಾನುವಾರ, 23 ಜುಲೈ 2017 (11:54 IST)
ಬೆಂಗಳೂರು: ನಟಿ, ಕಾಂಗ್ರೆಸ್ ನಾಯಕಿ ರಮ್ಯಾ ಇದೀಗ ಪಕ್ಷದ ಸಾಮಾಜಿಕ ಜಾಲತಾಣಗಳ ವ್ಯವಸ್ಥಾಪಕಿ. ಇತ್ತೀಚೆಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಜಿಎಸ್ ಟಿ ಬಗ್ಗೆ ಹೊಗಳಿದ್ದಕ್ಕೆ ರಮ್ಯಾ ಟ್ವಿಟರ್ ನಲ್ಲಿ ತಿರುಗೇಟು ನೀಡಿದ್ದಾರೆ.


ಜಿಎಸ್ ಟಿ ಮಸೂದೆ ಪಾರದರ್ಶಕ ಆಡಳಿತದ ಸಂಕೇತ ಎಂದಿದ್ದ ಸಚಿವರಿಗೆ ತಿರುಗೇಟು ನೀಡಿರುವ ರಮ್ಯಾ ‘ಲೋಕಪಾಲ್ ಮಸೂದೆ ಕಳೆದ ಮೂರು ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿದೆ. ಯುಪಿಎ ಜಾರಿಗೆ ತಂದ ಮಾಹಿತಿ ಹಕ್ಕು ಖಾಯಿದೆಯನ್ನು ದುರ್ಬಲಗೊಳಿಸಲಾಗಿದೆ. ಇನ್ನೆಲ್ಲಿಯ ಪಾರದರ್ಶಕ ಆಡಳಿತ?’ ಎಂದು ತಿರುಗೇಟು ನೀಡಿದ್ದಾರೆ.

ಇತ್ತೀಚೆಗೆ ಸಾರ್ವಜನಿಕರ ಮುಂದೆ ಕಾಣಿಸಿಕೊಳ್ಳದಿದ್ದರೂ, ಸಾಮಾಜಿಕ ಜಾಲತಾಣದ ಮೂಲಕ ಪಕ್ಷದ ಪರ ಹಾಗೂ ಆಡಳಿತಾರೂಢ ಬಿಜೆಪಿ ವಿರುದ್ಧ ರಮ್ಯಾ ವಾಗ್ದಾಳಿ ನಡೆಸುತ್ತಲೇ ಇರುತ್ತಾರೆ.

ಇದನ್ನೂ ಓದಿ..  ಶಾಕಿಂಗ್! ಫೈನಲ್ ಗೂ ಮೊದಲು ಹರ್ಮನ್ ಪ್ರೀತ್ ಗೆ ಗಾಯ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ