ಪಡಿತರ ಅಂಗಡಿ ಕಮಿಷನ್‌ ಹೆಚ್ಚಳ: ಸಚಿವ ಯು.ಟಿ.ಖಾದರ್

ಶುಕ್ರವಾರ, 22 ಜುಲೈ 2016 (17:32 IST)
ಪಡಿತರ ಅಂಗಡಿ ಕಮಿಷನ್‌ನ್ನು 36 ರೂಪಾಯಿಗಳಿಂದ 70 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
 
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಡಿತರ ಅಂಗಡಿಯ ಕಮಿಷನ್‌ನ್ನು 36 ರೂಪಾಯಿಗಳಿಂದ 70 ರೂಪಾಯಿಗಳಿಗೆ ಹೆಚ್ಚಳ ಮಾಡಲಾಗಿದ್ದು, ಜೊತೆಗೆ ಉಪ್ಪು ಮತ್ತು ತಾಳೆ ಎಣ್ಣೆ ಮೇಲಿನ ಕಮಿಷನ್ ಸಹ ಹೆಚ್ಚಳ ಮಾಡಲಾಗಿದೆ ಎಂದು ತಿಳಿಸಿದರು.
 
ಗ್ರಾಹಕರು ಕೂಪನ್ ಮೂಲಕ ಆಹಾರ ಪದಾರ್ಥಗಳನ್ನು ಕೊಳ್ಳಬಹುದು. 1614 ಸಂಖ್ಯೆಗೆ ಎಸ್‌ಎಂಎಸ್ ಕಳುಹಿಸುವ ಮೂಲಕ ಕೂಪನ್ ಪಡೆಯಬಹುದಾಗಿದ್ದು, ಗ್ರಾಹಕರು ಇಚ್ಚಿಸುವ ಅಂಗಡಿಯಲ್ಲೇ ರೇಶನ್ ಪಡೆಯಬಹುದು ಎಂದು ತಿಳಿಸಿದರು.
 
ಖಾಸಗಿಯವರಿಗೆ ರೇಶನ್ ಅಂಗಡಿ ತೆರೆಯಲು ಅವಕಾಶವಿಲ್ಲ. ಬದಲಾಗಿ ಸ್ವಯಂ ಸೇವಾ ಸಂಘಗಳಿಗೆ ತೆರೆಯಲು ಅನುಮತಿ ನೀಡಲಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ