ಕೇದಾರನಾಥಗೆ ಪ್ರಯಾಣಬೆಳೆಸುವವರು ಈ ಸುದ್ದಿಯನ್ನು ಮಿಸ್ ಮಾಡದೇ ಓದಲೇ ಬೇಕು

Sampriya

ಭಾನುವಾರ, 15 ಜೂನ್ 2025 (17:43 IST)
Photo Courtesy X
ರುದ್ರಪ್ರಯಾಗ (ಉತ್ತರಾಖಂಡ): ಜಂಗಲ್‌ಚಟ್ಟಿ ಬಳಿಯ ಕಣಿವೆಗೆ ಅವಶೇಷಗಳು ಮತ್ತು ಕಲ್ಲುಗಳು ಬಿದ್ದ ಕಾರಣ ಉತ್ತರಾಖಂಡದ ಸೋನ್‌ಪ್ರಯಾಗದಿಂದ ಕೇದಾರನಾಥ ಧಾಮಕ್ಕೆ ತೀರ್ಥಯಾತ್ರೆಯನ್ನು ಮುಂದೂಡಲಾಗಿದೆ ಎಂದು ರುದ್ರಪ್ರಯಾಗ ಪೊಲೀಸರು ಭಾನುವಾರ ತಿಳಿಸಿದ್ದಾರೆ. 

ಇದಲ್ಲದೆ ಕೇದಾರನಾಥ ಧಾಮಕ್ಕೆ ಬರುವ ಭಕ್ತರು ಸುರಕ್ಷಿತವಾಗಿರಲು ಪೊಲೀಸರು ಮನವಿ ಮಾಡಿದ್ದಾರೆ.

"ಜಂಗಲ್‌ಚಟ್ಟಿ ಬಳಿಯ ಕಣಿವೆಗೆ ಅವಶೇಷಗಳು ಮತ್ತು ಕಲ್ಲುಗಳು ಬಿದ್ದಾಗ ಪಾದಚಾರಿ ಮಾರ್ಗ ಅಡಚಣೆಯಾಯಿತು. ಸೋನ್‌ಪ್ರಯಾಗದಿಂದ ಕೇದಾರನಾಥ ಧಾಮಕ್ಕೆ ತೀರ್ಥಯಾತ್ರೆಯನ್ನು ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ. 


ಶ್ರೀ ಕೇದಾರನಾಥ ಧಾಮಕ್ಕೆ ಬರುವ ಭಕ್ತರು ಎಲ್ಲಿದ್ದರೂ ಸುರಕ್ಷಿತವಾಗಿರಲು ಜಿಲ್ಲಾ ಪೊಲೀಸರು ಮನವಿ ಮಾಡುತ್ತಾರೆ," ಎಂದು ರುದ್ರಪ್ರಯಾಗ ಪೊಲೀಸರು ಉತ್ತರಾಖಂಡ್‌ನಲ್ಲಿ ಭಾನುವಾರ X ನಲ್ಲಿ ಪೋಸ್ಟ್ ಮಾಡಿದ್ದಾರೆ. 

ಏತನ್ಮಧ್ಯೆ, ರುದ್ರಪ್ರಯಾಗ ಜಿಲ್ಲೆಯಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಏಳು ಜನರು ಸಾವನ್ನಪ್ಪಿದ ನಂತರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಎಚ್ಚರಿಸಿದ್ದಾರೆ. 

ನಾಗರಿಕ ವಿಮಾನಯಾನ ನಿರ್ದೇಶನಾಲಯದ ನಿಯಮಗಳನ್ನು ಪಾಲಿಸಲು ವಿಮಾನಯಾನ ಕಂಪನಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದ್ದಾರೆ. ಘಟನೆಯ ನಂತರ, ಮುಂದಿನ ಎರಡು ದಿನಗಳವರೆಗೆ ಹೆಲಿಕಾಪ್ಟರ್ ಸೇವೆಗಳು ಕಾರ್ಯನಿರ್ವಹಿಸುವುದಿಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ