ಸಿಎಂ ಸಿದ್ದರಾಮಯ್ಯಗೆ ರೆಬೆಲ್ ಸ್ಟಾರ್ ಅಂಬರೀಷ್ ಟಾಂಗ್

ಶನಿವಾರ, 3 ಜೂನ್ 2017 (16:56 IST)
ಸಿಎಂ ಸಿದ್ದರಾಮಯ್ಯ ಎಲ್ಲಾ ಇಲಾಖೆಗಳ ಬಗ್ಗೆ ಮಾತನಾಡಿದ್ದಾರೆ. ಆದರೆ, ವಸತಿ ಇಲಾಖೆಯ ಬಗ್ಗೆ ಮಾತ್ರ ಮಾತನಾಡಿಲ್ಲ. ವಸತಿ ಇಲಾಖೆಗೆ ಮೂರು ಚಿನ್ನದ ಪದಕಗಳು ಬಂದಿವೆ ಎಂದು ಸಿಎಂ ಸಿದ್ದರಾಮಯ್ಯಗೆ ಅಂಬರೀಷ್ ಟಾಂಗ್ ನೀಡಿದರು.
 
ಮೈಸೂರು ಸಾಧನಾ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಇಲ್ಲಿಯವರೆಗೆ 230 ಚಿತ್ರಗಳನ್ನು ಮಾಡಿದ್ದೇನೆ. ಆದ್ರೆ 230 ಚಿತ್ರಗಳಲ್ಲೂ ನಾನು ಇಷ್ಟು ಮಾತನಾಡಿರಲಿಲ್ಲ ಎಂದು ಲೇವಡಿ ಮಾಡಿದರು.
 
ವಸತಿ ಇಲಾಖೆಗೆ ಚಿನ್ನದ ಪದಕಗಳನ್ನು ಬಂದಿರುವ ಬಗ್ಗೆ ಸಿಎಂ ಹೇಳದಿದ್ದರೂ ಪರ್ವಾಗಿಲ್ಲ. ಜನತೆಗೆ ಎಲ್ಲವೂ ಗೊತ್ತಿದೆ ಎಂದರು.
 
ಹಿಂದೆ ನೀಡಿದ್ದ ಪ್ರಮಾಣವನ್ನು ನೆನಪಿಸಿದ ಅಂಬರೀಷ್, ಮುಖ್ಯಮಂತ್ರಿಗಳೇ ಬೀರೇಶ್ವರ್ ದೇವರ ಮುಂದೆ ನೀವು ಮಾಡಿದ ಪ್ರಮಾಣವನ್ನು ನಡೆಸಿಕೊಡಿ ಎಂದು ಮನವಿ ಮಾಡಿದರು.
 
ಸಿಎಂ ಸಿದ್ದರಾಮಯ್ಯ ಅಂಬರೀಷ್ ಅವರ ಮುಂದೆ ಯಾವ ಮಾತು ನಡೆಸಿಕೊಡ್ತೀನಿ ಎಂದು ಹೇಳಿದ್ದಾರೆ ಎನ್ನುವ ಬಗ್ಗೆ ಸಮಾವೇಶದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ