ಗಣೇಶನ ಹಬ್ಬದ ಗದ್ದಲದಲ್ಲಿ ಇದನ್ನು ಮಾತ್ರ ಮರೀಬೇಡಿ!
ಭಕ್ತಿಯಿಂದ ಪೂಜೆ ಮಾಡಲು ಗಣೇಶನ ದೊಡ್ಡ ಮೂರ್ತಿಯೇ ಆಗಬೇಕೆಂದಿಲ್ಲ. ಚಿಕ್ಕದಾದ ಮಣ್ಣಿನ ಗಣಪನ ಕೂರಿಸಿದರೂ ಸಾಕು. ದೊಡ್ಡ ದೊಡ್ಡ ಗಣಪನ ಮೂರ್ತಿ ತಂದು ಅದನ್ನು ವಿಸರ್ಜಿಸಲು ವಿಪರೀತ ನೀರು ಖರ್ಚು ಮಾಡುವುದು, ಅದನ್ನು ಎಲ್ಲೆಂದರಲ್ಲಿ ಬಿಸಾಕುವುದು ಮಾಡಿದರೆ ಖಂಡಿತಾ ಗಣೇಶ ಒಲಿಯಲ್ಲ. ನಮ್ಮ ಪರಿಸರ ಹಾಳಾಗಬಹುದಷ್ಟೇ. ಹೀಗಾಗಿ ಪರಿಸರದ ಬಗೆಗಿನ ಕಾಳಜಿ ಮನಸ್ಸಲ್ಲಿಟ್ಟುಕೊಂಡು ಹಬ್ಬ ಆಚರಿಸಿ.