ಗೌರಿ-ಗಣೇಶ ಹಬ್ಬದಂದು ವಿಚಾರಣೆಗೆ ಹಾಜರಾಗಲಿರುವ ಡಿಕೆಶಿ

ಭಾನುವಾರ, 1 ಸೆಪ್ಟಂಬರ್ 2019 (11:25 IST)
ಬೆಂಗಳೂರು : ಅಕ್ರಮ ಆಸ್ತಿ ಹೊಂದಿರುವ ಆರೋಪದಲ್ಲಿ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಜಾರಿ ನಿರ್ದೇಶನಲಾಯದ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಲೇ ಇದ್ದಾರೆ.




ಇಂದು ಭಾನುವಾರವಾದ್ದರಿಂದ ವಿಚಾರಣೆಯಿಂದ ಕೊಂಚ ರಿಲೀಫ್ ಪಡೆದ ಡಿಕೆ ಶಿವಕುಮಾರ್ ಅವರಿಗೆ ನಾಳೆ ಅಂದರೆ ಸೋಮವಾರ ಗೌರಿ-ಗಣೇಶ ಹಬ್ಬವಿದ್ದರೂ ಕೂಡ ವಿಚಾರಣೆಗೆ ಹಾಜರಾಗಬೇಕಿದೆ ಎನ್ನಲಾಗಿದೆ.


ಸೋಮವಾರ ಗೌರಿ-ಗಣೇಶ ಹಬ್ಬ ಹಿನ್ನೆಲೆಯಲ್ಲಿ ಡಿಕೆಶಿ ವಿಚಾರಣೆಗೆ ವಿನಾಯಿತಿ ಕೋರಿದ್ದಾರೆ ಎನ್ನಲಾಗಿದ್ದು, ಆದರೆ ಇದಕ್ಕೆ ಒಪ್ಪದ ಇಡಿ ಅಧಿಕಾರಿಗಳು ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ