ಕಾಂಗ್ರೆಸ್ ಗೆ ತಿರುಗೇಟು ನೀಡಿದ ರೇಣುಕಾಚಾರ್ಯ

ಬುಧವಾರ, 4 ಡಿಸೆಂಬರ್ 2019 (11:58 IST)
ದಾವಣಗೆರೆ : ಕಾಂಗ್ರೆಸ್ ಅಭ್ಯರ್ಥಿ ಕೋಳಿವಾಡ ಮನೆ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಲಿನ ಹತಾಶೆಯಲ್ಲಿ ಬಿಜೆಪಿ ವಿರುದ್ಧ ಆರೋಪ  ಮಾಡುತ್ತಿದ್ದಾರೆ ಎಂದು ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.



ಮನೆಯಲ್ಲಿ ಅಕ್ರಮವಾಗಿ ಹಣ, ಮಧ್ಯ ಇಟ್ಟಿಕೊಂಡಿದ್ದಾರೆ ಎಂಬ ದೂರಿನ ಆಧಾರದ ಮೇಲೆ ಕಾಂಗ್ರೆಸ್ ಅಭ್ಯರ್ಥಿ ಕೋಳಿವಾಡ ಮನೆ ಮೇಲೆ ಐಟಿ ಅಧಿಕಾರಿಗಳು ನಿನ್ನೆ ದಾಳಿ ನಡೆಸಿದ್ದರು. ಉಪಚುನಾವಣೆಯ ಹೊತ್ತಲ್ಲಿ ಈ ದಾಳಿ ನಡೆಸಿರುವುದು ಬಿಜೆಪಿಯ ಪ್ರಯೋಜಿತ ದಾಳಿ ಎಂದು  ಕಾಂಗ್ರೆಸ್  ಆರೋಪಿಸಿದೆ.

 

ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ರೇಣುಕಾಚಾರ್ಯ, ಸೋಲಿನ ಹತಾಶೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೋಳಿವಾಡ ಬಿಜೆಪಿ ವಿರುದ್ಧ ಆರೋಪ  ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಕ್ಷೇತ್ರಕ್ಕೆ ಬಂದಾಗ ಮತದಾರರಿಗೆ 500ರಿಂದ 1000 ರೂಪಾಯಿ ಹಂಚಿದ್ರು, ನಾವು ದಾಳಿ ಮಾಡಿಸುವುದಾದ್ರೆ ಆಗಲೇ ಮಾಡಿಸುತ್ತಿದ್ದೆವು ಎಂದು ಕಿಡಿಕಾರಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ