ಮದ್ಯ ಸೇವಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ರೆಸ್ಟೋರೆಂಟ್ ಮಾಲಿಕನ ಎಳೆದಾಡಿದ ದುರಳರು

ಭಾನುವಾರ, 20 ಡಿಸೆಂಬರ್ 2020 (09:07 IST)
ಬೆಂಗಳೂರು: ಮನೆ ಹೊರಗೆ ಐವರು ದುಷ್ಕರ್ಮಿಗಳ ಗುಂಪು ಮದ್ಯ ಸೇವನೆ ಮಾಡಿ, ಬೇಕಾಬಿಟ್ಟಿ ನಡೆದುಕೊಳ್ಳುವುದನ್ನು ಪ್ರಶ್ನಿಸಿದ್ದಕ್ಕೆ ರೆಸ್ಟೋರೆಂಟ್ ಮಾಲಿಕನೊಬ್ಬನ ಮೇಲೆ ಹಲ್ಲೆ ನಡೆಸಲಾಗಿದೆ.


ಕೆ.ಆರ್. ಪುರಂ ಬಳಿ ಈ ಘಟನೆ ನಡೆದಿದೆ. ತನ್ನ ಮನೆಯ ಹೊರಗೆ ರಾತ್ರಿ ಬೀದಿ ನಾಯಿಗಳ ಆಹಾರ ಹಾಕುವಾಗ ಮದ್ಯ ಸೇವಿಸಿ ಹದ್ದುಮೀರಿ ವರ್ತಿಸುತ್ತಿದ್ದ ಯುವಕರಿಗೆ ರೆಸ್ಟೋರೆಂಟ್ ಮಾಲಿಕ ಬುದ್ಧಿ ಹೇಳಲು ಹೋಗಿದ್ದಾರೆ. ಇದೇ ಕಾರಣಕ್ಕೆ ಅವರನ್ನು ಎಳೆದಾಡಿ ಹಲ್ಲೆ ನಡೆಸಲಾಗಿದೆ. ಈ ಸಂಬಂಧ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ