ಮದುವೆಗೆ ನಿರಾಕರಿಸಿದ್ದಕ್ಕೆ ಹುಡುಗಿಯ ಬಾಳನ್ನೇ ಕೊನೆಗೊಳಿಸಿದ!

ಗುರುವಾರ, 17 ಡಿಸೆಂಬರ್ 2020 (09:30 IST)
ಚೆನ್ನೈ: ಮದುವೆಗೆ ಒಪ್ಪಲಿಲ್ಲವೆಂದು ಯುವತಿಯೊಬ್ಬಳನ್ನು 24 ವರ್ಷ ಯುವಕನೊಬ್ಬ ಬಸ್ ನಲ್ಲೇ ಕುತ್ತಿಗೆ ಸೀಳಿ ಗಂಭೀರ ಗಾಯಗೊಳಿಸಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.


ಕಾಲೇಜು ವಿದ್ಯಾರ್ಥಿನಿಯಾಗಿದ್ದ ಯುವತಿ ಜತೆಗೆ ಆರೋಪಿ ಯುವಕ ಕೆಲವು ದಿನಗಳಿಂದ ಸ್ನೇಹದಿಂದಿದ್ದ. ಆದರೆ ಪ್ರೇಮ ಸಂಬಂಧಕ್ಕೆ ಯುವತಿ ನಿರಾಕರಿಸಿದ್ದಳು. ಆದರೆ ಪಟ್ಟು ಬಿಡದೇ ಆತ ಮದುವೆಯಾಗುವಂತೆ ಪೀಡಿಸುತ್ತಿದ್ದ. ಆದರೆ ಈ ಬಾರಿ ಕಾಲೇಜಿಗೆ ಹೋಗಲು ಬಸ್ ಹತ್ತಿದ್ದ ಯುವತಿಯ ಮೇಲೆ ಚಾಕುವಿನಿಂದ ದಾಳಿ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ