ಕಳ್ಳತನಕ್ಕೆ ಬಂದವರು ಎಟಿಎಂ ಮೆಷಿನ್ ನನ್ನೇ ಹೊತ್ತೊಯ್ದರು

ಭಾನುವಾರ, 17 ಏಪ್ರಿಲ್ 2022 (08:58 IST)
ಬೆಂಗಳೂರು: ಕಳ್ಳತನ ಮಾಡಲು ಬಂದ ಖದೀಮರು ಎಟಿಎಂ ಮೆಷಿನ್ ನನ್ನೇ ಹೊತ್ತೊಯ್ದ ಘಟನೆ ನಗರದಲ್ಲಿ ನಡೆದಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಸೇರಿದ ಎಟಿಎಂ ದರೋಡೆಗೆ ಬಂದಿದ್ದ ಖದೀಮರು ಮೆಷಿನ್ ಜೊತೆಗೆ ಅಲ್ಲಿದ್ದ ಸಿಸಿಟಿವಿ ಡಿವಿಆರ್ ಗಳನ್ನೂ ಹೊತ್ತೊಯ್ದಿದ್ದಾರೆ.

ಬಳಿಕ ಗ್ಯಾಸ್ ಕಟ್ಟರ್ ಬಳಸಿ ಮೆಷಿನ್ ನಲ್ಲಿದ್ದ ಹಣ ದೋಚಿದ್ದಾರೆ. ಇದೀಗ ಮೆಷಿನ್ ಪತ್ತೆಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ