ಮದುವೆ ಆಗುವುದಾಗಿ ನಂಬಿಸಿ ನಟಿಗೆ ದೋಚಿದ ರೌಡಿ!

ಭಾನುವಾರ, 15 ಆಗಸ್ಟ್ 2021 (21:09 IST)

ಬುದ್ದಿವಂತ ಸಿನಿಮಾ ಮಾದರಿಯಲ್ಲಿ ನಟಿಯೊಬ್ಬಳಿಗೆ ತಾಳಿ ಕಟ್ಟಿ ಎರಡೂವರೆ ಲಕ್ಷ ರೂ. ಒಡವೆ ಜೊತೆ ರೌಡಿಯೊಬ್ಬ ಹೊತ್ತೊಯ್ದ ಘಟ

ನೆ ಬೆಂಗಳೂರಿನಲ್ಲಿ ನಡೆದಿದೆ.

ಹುಲಿಯೂರು ದುರ್ಗದ ಕುಖ್ಯಾತ ರೌಡಿ ತಮ್ಮ ಕುಣಿಗಲ್ ಗಿರಿ ಸ್ವಂತ ಅಣ್ಣ ರೌಡಿಶೀಟರ್ ಹರೀಶ್ ಈ ಕೃತ್ಯ ಎಸಗಿದ್ದು, ಹಲವು ಕೇಸ್ ಗಳಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ರೌಡಿ ಶೀಟರ್ ಹರೀಶ. ಕಳೆದ ವರ್ಷ ರಾಜಗೋಪಾಲನಗರ ಠಾಣೆ ವ್ಯಾಪ್ತಿಯಲ್ಲಿ ವಾಸವಿರವು ನಟಿ ಹಿಂದೆ ಬಿದ್ದಿದ್ದ. ನಾನು ನಿನ್ನ ಪ್ರೀತಿಸ್ತಿನಿ . ನಿನ್ನನ್ನೆ ಮದುವೆಯಾಗ್ತೀನಿ ಅಂತ ಹೇಳಿದ್ದ. ಅದ್ರಂತೆ ಯುವತಿಯ ಮನೆಯಲ್ಲೆ ಆಕೆಗೆ ತಾಳಿ ಕಟ್ಟಿ ಮದುವೆಯಾಗಿದ್ದ.

ಮದುವೆಯಾದ ನಂತರ ಒಂದೆರಡು ದಿನ ಸಿನಿಮಾ ನಟಿ ಜೊತೆ ವಾಸವಿದ್ದ. ನಂತರ ಆಕೆಯ ಬಳಿಯಿದ್ದ ಎರಡೂವರೆ ಲಕ್ಷ ಹಣ 180 ಗ್ರಾಂ ಚಿನ್ನಾಭರಣ ಎಗರಿಸಿ ಎಸ್ಕೇಪ್ ಆಗಿದ್ದಾನೆ. ಕೃತ್ಯದ ನಂತರ ಈ ಬಗ್ಗೆ ಮೋಸಹೋದ ನಟಿ ಹರೀಶನನ್ನ ಕೇಳಿದ್ರೆ ನಾನು ಈಗಾಗಲೇ ಮದುವೆ ಆಗಿದ್ದೀನಿ. ದುಡ್ಡು ಕೊಡಲ್ಲ. ಒಡವೆನೂ ಕೊಡಲ್ಲ ಏನ್ ಮಾಡ್ತಿಯ ಮಾಡ್ಕೊ ಅಂದಿದ್ದಾನೆ. ಅಲ್ಲದೇ ಜೈಲಲ್ಲಿರೋ ತನ್ನ ಸಹೋದರ ರೌಡಿಶೀಟರ್ ಕುಣಿಗಲ್ ಗಿರಿ ಕಡೆಯಿಂದ ಪೊನ್ ಮಾಡಿಸಿದ್ದಾನೆ. ಜೈಲಿನಿಂದ ಪೊನ್ ಮಾಡಿರೋ ಕುಣಿಗಲ್ ಗಿರಿ ಕೊಟ್ಟಿರೋ ಪೊಲೀಸ್ ಕಂಪ್ಲೆಂಟ್ ವಾಪಸ್ ತಗೊ. ಇಲ್ಲ ಕೊಲೆ ಮಾಡ್ತೀವಿ ಅಂತ ಮೋಸಹೋದ ಸಿನಿಮಾ ನಟಿಗೆ ಜೀವಬೆದರಿಕೆ ಹಾಕಿದ್ದಾರೆ.

ಸದ್ಯ ಘಟನೆ ಸಂಬಂಧ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಬಂಧ ಮೋಸ ಮಾಡಿರುವ ಹರೀಶ್ ಹಾಗೂ ಆತನ ಸಹೋದರ ಕುಣಿಗಲ್ ಗಿರಿ ವಿರುದ್ದ ದೂರು ದಾಖಲಾಗಿದೆ. ಎಫ್.ಐ.ಆರ್ ಆಗ್ತಿದ್ದಂತೆ ಆರೋಪಿ ಹರೀಶ್ ಎಸ್ಕೇಪ್ ಆಗಿದ್ದು ಆತನ ಪತ್ತೆಗಾಗಿ ಪೊಲೀಸರು ಬಲೆಬೀಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ