ರೌಡಿಶೀಟರ್ ಸ್ಲಂ ಭರತ್ ನ ಎನ್ ಕೌಂಟರ್ ಮಾಡಿದ್ದಕ್ಕೆ ಪೊಲೀಸ್ ಅಧಿಕಾರಿಗಳ ಹತ್ಯೆಗೆ ಸಂಚು ರೂಪಿಸಿದ್ದ ಸಹಚರರು

ಗುರುವಾರ, 12 ಮಾರ್ಚ್ 2020 (10:12 IST)
ಬೆಂಗಳೂರು : ರೌಡಿಶೀಟರ್ ಸ್ಲಂ ಭರತ್ ನ ಎನಕೌಂಟರ್ ಮಾಡಿದ ಹಿನ್ನಲೆಯಲ್ಲಿ  ಪೊಲೀಸ್ ಅಧಿಕಾರಿಗಳ ಹತ್ಯೆಗೆ ಆತನ ಸಹಚರರು ಸ್ಕೇಚ್ ಹಾಕಿದ್ದಾರೆ ಎಂಬ ಸ್ಪೋಟಕ ವಿಚಾರ ತಿಳಿದುಬಂದಿದೆ.


ರೌಡಿಶೀಟರ್ ಸ್ಲಂ ಭರತ್ ನ ಎನಕೌಂಟರ್ ಆದ ಬಳಿಕ ಆತನ ಸಹಚರರನ್ನು ಬಂಧಿಸಿದ ಬೆಂಗಳೂರು ಉತ್ತರ ವಿಭಾಗದ ಪೊಲೀಸರು ಅವರ ವಿಚಾರಣೆ ನಡೆಸಿದ್ದಾರೆ. ಆ ವೇಳೆ ಇಬ್ಬರು ಪೊಲೀಸ್ ಅಧಿಕಾರಿಗಳ ಹತ್ಯೆಗೆ ಸಂಚು ರೂಪಿಸಿದ್ದ ಬಗ್ಗೆ ಮಾಹಿತಿ ನೀಡಿದ್ದಾರೆ.


ಈಗಾಗಲೇ 12 ಸಹಚರರನ್ನು ಬಂಧಿಸಿದ ಬೆಂಗಳೂರು ಉತ್ತರ ವಿಭಾಗದ ಪೊಲೀಸರು ಇನ್ನುಳಿದ ಸಹಚರರ ಬಂಧನಕ್ಕಾಗಿ ಸಿದ್ಧತೆ ನಡೆಸುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ