ಡಿ ಹೆಚ್ ಶಂಕರ ಮೂರ್ತಿ ವಿರುದ್ಧ ಲೋಕಾಯುಕ್ತಕ್ಕೆ ದೂರು

ಶನಿವಾರ, 24 ಜೂನ್ 2017 (17:31 IST)
ಬೆಂಗಳೂರು: ಆರ್.ಟಿ.ಐ ಕಾರ್ಯಕರ್ತ ಹನುಮೇಗೌಡ ಎಂಬುವರು ಸಭಾಪತಿ ಡಿ.ಹೆಚ್.ಶಂಕರಮೂರ್ತಿ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದು, ಶಂಕರಮೂರ್ತಿಯವರು ಸರ್ಕಾರದಿಂದ ನೀಡಲಾಗುವ ಭತ್ಯೆ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.
 
ಶಿವಮೊಗ್ಗ ಮೂಲದ ಶಂಕರ್‌ಮೂರ್ತಿ, ನಕಲಿ ದಾಖಲೆ‌ ಸೃಷ್ಟಿಸಿ ಉಡುಪಿಯಿಂದ ಬೆಂಗಳೂರಿಗೆ ಓಡಾಟದ ಭತ್ಯೆ ಪಡೆದಿದ್ದಾರೆ. ಹೀಗೆ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ 1999 ರಿಂದ 2002 ರವರೆಗೆ 7,70,090 ರೂ.  ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಆರ್.ಟಿ.ಐನಲ್ಲೂ ಸೂಕ್ತವಾದ ಮಾಹಿತಿ ಲಭ್ಯವಿಲ್ಲ ಎಂದಿದ್ದಾರೆ.
 
ಶಿವಮೊಗ್ಗ ಮೂಲದ ಶಂಕರಮೂರ್ತಿಯವರು ಉಡುಪಿಯಿಂದ ಓಡಾಟದ ಭತ್ಯೆ ಪಡೆದಿರೋದು ತಪ್ಪು. ಹೀಗಾಗಿ ಈ ಬಗ್ಗೆ ಸೂಕ್ತ ತನಿಖೆ ಮಾಡಬೇಕೆಂದು ಹನುಮೇಗೌಡ ಆಗ್ರಹಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ