ಸಿನಿಮೀಯ ರೀತಿಯಲ್ಲಿ ಜೀವ ಉಳಿಸಿಕೊಂಡ ರೌಡಿಶೀಟರ್ ಜೆಸಿಬಿ ನಾರಾಯಣ

ಬುಧವಾರ, 8 ಡಿಸೆಂಬರ್ 2021 (18:52 IST)
ಬೆಂಗಳೂರಿನ ಹುಳಿಮಾವು ಡಿಎಲ್ಎಫ್ ರಸ್ತೆಯಲ್ಲಿ ಜೆಸಿಬಿ ನಾರಾಯಣ ಬರುವ ಮಾಹಿತಿ ಅರಿತ ದುಷ್ಕರ್ಮಿಗಳು ಹಾಡಹಗಲೇ ಮಾರಕಾಸ್ತ್ರಗಳನ್ನು ಹಿಡಿದು ಜೆಸಿಬಿ ನಾರಾಯಣನ ಮೇಲೆ ದಾಳಿ ನಡೆಸಲು ಹೊಂಚು ಹಾಕಿ ಕಾಯುತ್ತಿದ್ದಾರೆ. ಜೆಸಿಬಿ ನಾರಾಯಣನ ಕಾರು ಬರುತ್ತಿದ್ದಂತೆ ಕಾರು ಗಟ್ಟಿಯಾಗಿ ಹಲ್ಲೆಗೆ ಯತ್ನಿಸಿದ್ದಾರೆ.ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯ ನ್ಯಾಟೋರಿಯಸ್ ರೌಡಿಶೀಟರ್ ಜೆಸಿಬಿ ನಾರಾಯಣನ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು ಕೂಡಲೆ ಅಂತರದಲ್ಲಿ ರೌಡಿಶೀಟರ್ ಜೆಸಿಬಿ ನಾರಾಯಣ ಪಾರಾದ ಘಟನೆ ನಡೆದಿದೆ.
 
ಬೆಂಗಳೂರಿನ ಹುಳಿಮಾವು ಡಿಎಲ್ಎಫ್ ರಸ್ತೆಯಲ್ಲಿ ಜೆಸಿಬಿ ನಾರಾಯಣ ಬರುವ ಮಾಹಿತಿ ಅರಿತ ದುಷ್ಕರ್ಮಿಗಳು ಹಾಡಹಗಲೇ ಮಾರಕಾಸ್ತ್ರಗಳನ್ನು ಹಿಡಿದು ಜೆಸಿಬಿ ನಾರಾಯಣನ ಮೇಲೆ ದಾಳಿ ನಡೆಸಲು ಹೊಂಚು ಹಾಕಿ ಕಾಯುತ್ತಿದ್ದಾರೆ. ಜೆಸಿಬಿ ನಾರಾಯಣನ ಕಾರು ಬರುತ್ತಿದ್ದಂತೆ ಕಾರು ಅಡ್ಡಗಟ್ಟಿ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಜೆಸಿಬಿ ನಾರಾಯಣ ಅಪಾಯದ ಮುನ್ಸೂಚನೆ ಅರಿತು ಕೂಡಲೇ ಸಿನಿಮೀಯ ರೀತಿಯಲ್ಲಿ ಕಾರು ರಿವರ್ಸ್ ತೆಗೆದುಕೊಂಡು ಎಸ್ಪೇಪ್ ಆಗಿದ್ದಾನೆ. ಕೂಡಲೆ ಅಂತರದಲ್ಲಿ ಜೀವ ಉಳಿದಿದೆ. ನಾಲ್ಕೈದು ಜನ ದುಷ್ಕರ್ಮಿಗಳ ಚಲನವಲನ, ದುಷ್ಕರ್ಮಿಗಳು ಮಾರಕಾಸ್ತ್ರ ಹಿಡಿದು ಅಟ್ಯಾಕ್‌ಗೆ ಯತ್ನಿಸುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.ಹಾಕಿದ್ದ ಸ್ಕೆಚ್ ಮಿಸ್ ಆಕ್ತಿದ್ದಂತೆ ದುಷ್ಕರ್ಮಿಗಳ ಗ್ಯಾಂಗ್ ಸ್ಥಳದಿಂದ ಕಾಲ್ಕಿತ್ತಿದೆ. ಘಟನೆ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿ ಕ್ಯಾಮರಾವಾಳಿ ಹಾಗೂ ದೂರನ್ನ ಪ್ರದರ್ಶನಕ್ಕಾಗಿ ಆರೋಪಿಗಳಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ