ಸೈಕಲ್ ಜಾಥಾ ಮಾಡಿ ಕಾಂಗ್ರೆಸ್ ಪ್ರತಿಭಟನೆ

ಬುಧವಾರ, 7 ಜುಲೈ 2021 (14:03 IST)
ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆಯನ್ನು, ವಿನೂತನವಾಗಿ ಸೈಕಲ್ ಜಾಥ ಮಾಡಿ ನಡೆಸಿದರು. ಬೆಂಗಳೂರು ಹೊರವಲಯ ದಾಸರಳ್ಳಿಯಲ್ಲಿ ಈ ಜಾಥ ನಡೆಯಿತು.ಸೈಕಲ್ ತುಳಿಯುವ ಮೂಲಕ ತೈಲ ಬೆಲೆ ಏರಿಕೆಗೆ ಖಂಡನೆ ವ್ಯಕ್ತಪಡಿಸಿ,ಕೆಪಿಸಿಸಿ ಸದಸ್ಯ ಕೃಷ್ಣಮೂರ್ತಿ ಸೈಕಲ್ ತುಳಿಯುವ ಮೂಲಕ ಸೈಕಲ್ ಜಾಥಗೆ ಚಾಲನೆ ನೀಡಿದರು.
ಚಿಕ್ಕಬಾಣಾವರದಿಂದ ದಾಸರಹಳ್ಳಿ ಮೆಟ್ರೋವರೆಗೂ ಸೈಕಲ್ ಜಾಥಾ ಸಾಗಲಿದೆ.ನೂರಾರು ಕಾಂಗ್ರೆಸ್ ಕಾರ್ಯಕರ್ತರು ಸೈಕಲ್ ಜಾಥಾದಲ್ಲಿ ಭಾಗಿ ಯಾದರು.
ದಾಸರಹಳ್ಳಿಯ 8 ವಾರ್ಡ್ಗಳಲ್ಲೂ ಸೈಕಲ್ ಜಾಥಾ ನಡೆಯಲಿದ್ದು ಕೂಡಲೇ ತೈಲ ಬೆಲೆ ಇಳಿಸಬೇಕೆಂದು ಒತ್ತಾಯಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ