ಸಮಯ ಸುದ್ದಿ ವಾಹಿನಿ ಮೇಲೆ ಐಟಿ ದಾಳಿ: ವರದಿ

ಮಂಗಳವಾರ, 20 ಜೂನ್ 2017 (17:20 IST)
ಕನ್ನಡದ ಸಮಯ ಸುದ್ದಿ ವಾಹಿನಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ. ಬೆಳಗ್ಗೆ 11 ಗಂಟೆಯಿಂದಲೇ ಕಸ್ತೂರ ಬಾ ರಸ್ತೆಯಲ್ಲಿರುವ ಕಚೇರಿ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆ ಪತ್ರಗಳ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.
 

ನೋಟ್ ಬ್ಯಾನ್ ಬಳಿಕ ನಗದು ರೂಪದಲ್ಲಿ ವೇತನ ನೀಡುವಂತಿಲ್ಲ. ಆದರೂ, ನಗದು ರೂಪದಲ್ಲಿ ನೌಕರರಿಗೆ ವೇತನ ನೀಡುತ್ತಿದ್ದ ಆರೋಪದಡಿ ಈ ದಾಳಿ ನಡೆದಿದೆ ಎನ್ನಲಾಗಿದೆ. ವಾಹಿನಿಯ ಮುಖ್ಯಸ್ಥ ವಿಜಯ್ ಟಾಟಾ ಸೇರಿ ಹಲವರನ್ನ ವಿಚಾರನೆಗೆ ಒಳಪಡಿಸಲಾಗಿದೆ ಎಂದು ವರದಿಯಾಗಿದೆ.

ಕಂಪನಿಯ 30 ಸಿಬ್ಬಂದಿಗೆ ಕೆಲಸದ ಮಾಹಿತಿಗಳ ಕುರಿತಾದ ಫಾರ್ಮ್ ತುಂಬುವಂತೆಯೂ ಹೇಳಲಾಗಿದೆ. ಆರ್.ಟಿ. ನಗರದ ಕಂಪನಿಯ ಕಚೇರಿ ಮೇಲೂ ದಾಳಿ ನಡೆದಿದೆ ಎಂದು ವರದಿಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ