ಸ್ಯಾಂಡಲ್ ವುಡ್ ನ ಡ್ರಗ್ಸ್ ದಂಧೆ ಪ್ರಕರಣ; ಕಾಂಗ್ರೆಸ್ ಕಾರ್ಪೋರೇಟರ್ ಪುತ್ರನಿಗೆ ಎನ್ ಸಿಬಿ ನೋಟಿಸ್

ಭಾನುವಾರ, 6 ಸೆಪ್ಟಂಬರ್ 2020 (11:46 IST)
ಬೆಂಗಳೂರು : ಸ್ಯಾಂಡಲ್ ವುಡ್ ನ ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಕಾರ್ಪೋರೇಟರ್ ಕೇಶವ ಮೂರ್ತಿ ಪುತ್ರನಿಗೆ ಎನ್ ಸಿಬಿ ನೋಟಿಸ್ ನೀಡಲಾಗಿದೆ.

ಸ್ಯಾಂಡಲ್ ವುಡ್ ನ ಡ್ರಗ್ಸ್ ದಂಧೆ ಪ್ರಕರಣದಲ್ಲಿ ಸಚಿವರು, ರಾಜಕೀಯ ನಾಯಕರ ಪುತ್ರರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ, ಈ ನಡುವೆ ಇದೀಗ ಕಾಂಗ್ರೆಸ್ ಕಾರ್ಪೋರೇಟರ್ ಕೇಶವ ಮೂರ್ತಿ ಪುತ್ರನ ಹೆಸರು ಕೇಳಿ ಬಂದಿದ್ದು, ಈ ಹಿನ್ನಲೆಯಲ್ಲಿ ಮುಂಬೈನ ಎನ್ ಸಿಬಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಕೇಶವ ಮೂರ್ತಿ, ನನ್ನ ಮಗನಿಗೆ ನೋಟಿಸ್ ಬಂದಿರುವುದು ಗೊತ್ತಿಲ್ಲ. ನನ್ನ ಮಗನಿಗೆ ಸ್ಯಾಂಡಲ್ ವುಡ್ ಲಿಂಕ್ ಇಲ್ಲ. ಜಿಮ್ ಮಾಡ್ಕೊಂಡು ನನ್ನ ಮಗ ಚೆನ್ನಾಗಿದ್ದಾನೆ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ