ಸ್ಯಾಂಡಲ್ ವುಡ್ ಎಲ್ಲಾ ಚಿತ್ರಗಳು ಇಂದು ರದ್ದು ..!!

ಶುಕ್ರವಾರ, 29 ಅಕ್ಟೋಬರ್ 2021 (15:49 IST)
ನಟ ಪುನೀತ್ ರಾಜ್ ಕುಮಾರ್ ಅವರಿಗೆ ಹೃದಯಾಘಾತವಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವಿಕ್ರಂ ಆಸ್ಪತ್ರೆಯ ವೈದ್ಯರು ತಿಳಿಸಿದ್ದರು. ಬೆಳಗ್ಗೆ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಕುಸಿದು ಬಿದ್ದ ಅವರನ್ನು ವಿಕ್ರಂ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಲಾಗಿತ್ತು.ಪವರ್ ಸ್ಟಾರ್ ಪುನೀತ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರು ಆಸ್ಪತ್ರೆಗೆ ದಾಖಲಾಗ್ತಿದ್ದಂತೆ ಬೆಂಗಳೂರಿನ ಹಲವೆಡೆ ಭಜರಂಗಿ-2 ಪ್ರದರ್ಶನ ರದ್ದು ಮಾಡಲಾಗಿದೆ. ಮ್ಯಾಟನಿ ಹಾಗೂ ಸಂಜೆ ಶೋಗಳು ಕ್ಯಾನ್ಸಲ್ ಆಗಿವೆ. ರಾಜ್ಯದ ಬಹುತೇಕ ಕಡೇ ಭಜರಂಗಿ-2 ಪ್ರದರ್ಶನ ನಿಂತಿದೆ. ಭಜರಂಗಿ ಸೇರಿದಂತೆ ಬಿಡುಗಡೆಯದ ಚಿತ್ರಗಳ ಪ್ರದರ್ಶನ ಬಂದ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ