ಪೌರತ್ವ ಪ್ರಮಾಣ ಪತ್ರ ವಿತರಣಾ ಸಮಾರಂಭದ ಕುರಿತು ಬಿಜೆಪಿ ರಾಜ್ಯಾಧ್ಯಕ್ಷರಿಗೆ ಪತ್ರ ಬರೆದ ಸಂಸದ ಸಂಗಣ್ಣ

ಭಾನುವಾರ, 5 ಜನವರಿ 2020 (11:38 IST)
ರಾಯಚೂರು : ಸಿಂಧನೂರಿನಲ್ಲಿರುವ ಬಾಂಗ್ಲಾ ವಲಸಿಗರಿಗೆ  ಪೌರತ್ವ ಪ್ರಮಾಣ ಪತ್ರ ವಿತರಣಾ ಸಮಾರಂಭಕ್ಕೆ ದಿನಾಂಕ ನಿಗದಿಪಡಿಸುವಂತೆ ಕೊಪ್ಪಳ ಸಂಸದ ಸಂಗಣ್ಣ ಕರಡಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಗೆ ಪತ್ರ ಬರೆದಿದ್ದಾರೆ.

ಭಾರತ- ಬಾಂಗ್ಲಾ ವಿಭಜನೆಯ ಬಳಿಕ ಭಾರತಕ್ಕೆ ಬಂದ ಬಾಂಗ್ಲಾ ನಿವಾಸಿಗಳಾದ ಸುಮಾರು 20ಸಾವಿರ ಜನ  ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿರುವ ಆರ್.ಎಚ್ ಕ್ಯಾಂಪ್ 1ರಿಂದ 5ರಲ್ಲಿ ವಾಸಿಸುತ್ತಿದ್ದಾರೆ. ಇವರು ಪೌರತ್ವ  ತಿದ್ದುಪಡಿ ಕಾಯ್ದೆಯಿಂದ ಭಾತರದ ಪೌರತ್ವ ಪಡೆಯಲಿದ್ದಾರೆ.

 


 

ಈ ಹಿನ್ನಲೆಯಲ್ಲಿ ನಳೀನ್ ಕುಮಾರ್ ಕಟೀಲ್ ಗೆ ಪತ್ರ ಬರೆದ ಸಂಸದ ಸಂಗಣ್ಣ ಕರಡಿ, ಬಾಂಗ್ಲಾ ವಲಸಿಗರಿಗೆ  ಪೌರತ್ವ ಪ್ರಮಾಣ ಪತ್ರ ವಿತರಣಾ ಸಮಾರಂಭ 15 ಜನವರಿ 2020ರೊಳಗೆ ನಡೆಸಬೇಕು. ಪ್ರಧಾನಿ ಮೋದಿ ಮತ್ತ್ತು ಅಮಿತ್ ಶಾ ದಿನಾಂಕ ನಿಗದಿ ಪಡಿಸಿ ಈ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಪತ್ರದ ಮೂಲಕ ತಿಳಿಸಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ