ಸಂಗೊಳ್ಳಿ ರಾಯಣ್ಣ ಪುತ್ಥಳಿ ಗಲಾಟೆ : ಕೆ.ಎಸ್.ಈಶ್ವರಪ್ಪ ಹೇಳೋದೇನು?

ಶನಿವಾರ, 29 ಆಗಸ್ಟ್ 2020 (11:09 IST)
ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿ ಸ್ಥಾಪನೆ ಕುರಿತು ನಡೆದ ಗಲಾಟೆ ಬಗ್ಗೆ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.


ಗಲಾಟೆ ನಡೆದಿರುವ ಕುರಿತಾಗಿ ಈಗಾಗಲೇ ಮೂರು ಕೇಸ್ ಗಳು ದಾಖಲಾಗಿವೆ. ಮೂರ್ತಿ ವಿವಾದ ಸಮಸ್ಯೆ ಪರಿಹಾರವಾಗಿದೆ ಎಂದಿದ್ದಾರೆ.

ಹೀಗಾಗಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿಯವರ ಜೊತೆ ಮಾತನಾಡಿದ್ದು, ಕೇಸ್ ವಾಪಸ್ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದಿದ್ದಾರೆ.

ಶಿವಾಜಿ, ರಾಯಣ್ಣ ಮೂರ್ತಿ ವಿವಾದ ಬೆಳಗಾವಿಯಲ್ಲಿ ಉಂಟಾಗಿ ಗಲಾಟೆ ನಡೆದಿತ್ತು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ