ಮೃತ ಪತಿಯ ಅಂತಿಮ ದರ್ಶನಕ್ಕೆ ಶಶಿಕಲಾ ನಟರಾಜನ್ ಗೆ ಸಿಗಲಿದೆ ಈ ಭಾಗ್ಯ

ಮಂಗಳವಾರ, 20 ಮಾರ್ಚ್ 2018 (09:13 IST)
ಬೆಂಗಳೂರು: ಪತಿ ನಟರಾಜನ್ ನಿನ್ನೆ ಮಧ್ಯರಾತ್ರಿ ನಿಧನರಾದ ಹಿನ್ನಲೆಯಲ್ಲಿ ಅಂತ್ಯ ಕ್ರಿಯೆಯಲ್ಲಿ ಪಾಲ್ಗೊಳ್ಳಲು ಶಶಿಕಲಾ ನಟರಾಜನ್ ಪರಪ್ಪನ ಅಗ್ರಹಾರ ಜೈಲಿನಿಂದ ಕೆಲ ದಿನಗಳ ಮಟ್ಟಿಗೆ ಬಿಡುಗಡೆ ಭಾಗ್ಯ ಸಿಗಲಿದೆ.

ಬಹು ಅಂಗಾಂಗ ವೈಕಲ್ಯದಿಂದ ವಿ. ನಟರಾಜನ್ ನಿನ್ನೆ ಮಧ್ಯರಾತ್ರಿ ಸುಮಾರು 1.30 ಕ್ಕೆ ಮೃತಪಟ್ಟಿದ್ದರು. ಪತಿ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟ ಹಿನ್ನಲೆಯಲ್ಲಿ ಶಶಿಕಲಾ ಎರಡು ದಿನಗಳ ಹಿಂದೆ ಪೆರೋಲ್ ಗೆ ಅರ್ಜಿ ಸಲ್ಲಿಸಿದ್ದರು ಎನ್ನಲಾಗಿತ್ತು.

ಇದೀಗ ಪತಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಪೆರೋಲ್ ಗೆ ಅರ್ಜಿ ಸಲ್ಲಿಸಲು ಶಶಿಕಲಾ ನಟರಾಜನ್ ಪರ ವಕೀಲ ಸುರೇಶ್ ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ್ದಾರೆ. 10 ದಿನಗಳ ಕಾಲ ಶಶಿಕಲಾಗೆ ಪೆರೋಲ್ ಸಿಗುವ ಸಾಧ್ಯತೆಯಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ            

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ