‘ಸವದಿ ರೈತರನ್ನು ಹೆದರಿಸುತ್ತಿದ್ದಾರೆ

ಶುಕ್ರವಾರ, 5 ಮೇ 2023 (14:14 IST)
PKPS ಸೊಸೈಟಿಗಳ ಮೂಲಕ ಮಾಜಿ ಡಿಸಿಎಂ ಲಕ್ಷ್ಮಣ​ ಸವದಿ ರೈತರನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಲಕ್ಷ್ಮಣ್​ ಸವದಿ ವಿರುದ್ಧ ಕಾಗವಾಡ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ್ ಕಿಡಿಕಾರಿದ್ದಾರೆ. ಚಿಕ್ಕೋಡಿಯಲ್ಲಿ ಮಾತನಾಡಿದ ಅವರು, PKPS ಮೂಲಕ ರೈತರನ್ನು ಬೆದರಿಸಿ ಕಾಂಗ್ರೆಸ್​​ಗೆ ಮತ ಹಾಕಿ ಎಂದು ಬೆದರಿಸುತ್ತಿದ್ದಾರೆ ಎಂದು ಲಕ್ಷ್ಮಣ್​​ ಸವದಿ ಹೆಸರೇಳದೇ ಸವದಿ ವಿರುದ್ಧ ಗುಡುಗಿದ್ದಾರೆ. ಸವದಿ ಕಾಂಗ್ರೆಸ್ ಎಂಟ್ರಿಯಿಂದ ಶ್ರೀಮಂತ ಪಾಟೀಲ್ ಬೆದರಿದ್ದಾರೆಂದು ಹೇಳಲಾಗ್ತಿದ್ದು, ಇದೀಗ ಸವದಿ ವಿರುದ್ಧ ಆರೋಪಿಸಿ ಹೊಸ ದಾಳ ಉರುಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ