ಶಾಲಾರಂಭದ ಬಗ್ಗೆ ಇಂದು ನಿರ್ಧಾರ

ಸೋಮವಾರ, 28 ಜೂನ್ 2021 (09:02 IST)
ಬೆಂಗಳೂರು: ಶಾಲಾರಂಭದ ಬಗ್ಗೆ ಇಂದು ಶಿಕ್ಷಣ ಸಚಿವರು ಮಹತ್ವದ ಸಮಾರಂಭ ನಡೆಸಲಿದ್ದು, ಇಂದು ಈ ಬಗ್ಗೆ ತೀರ್ಮಾನ ಹೊರಬೀಳುವ ಸಾಧ್ಯತೆಯಿದೆ.


ಇಂದು ತಜ್ಞರೊಂದಿಗೆ ಉನ್ನತ ಮಟ್ಟದ ಸಭೆ ನಡೆಯಲಿದ್ದು, ಶಾಲೆ ಯಾವಾಗ ಆರಂಭಿಸಬೇಕು, ಆಫ್ ಲೈನ್ ಕಡ್ಡಾಯಗೊಳಿಸಬೇಕೋ, ಆನ್ ಲೈನ್ ಮುಂದುವರಿಸಬೇಕೋ ಎಂಬ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ.

ಇದಲ್ಲದೆ, ಎಸ್ಎಸ್ಎಲ್ ಸಿ ಪರೀಕ್ಷೆ ವೇಳಾಪಟ್ಟಿಯೂ ಪ್ರಕಟವಾಗುವ ಸಾಧ‍್ಯತೆಯಿದೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ನೇತೃತ್ವದಲ್ಲಿ ನಡೆಯಲಿರುವ ಜಿಲ್ಲಾಧಿಕಾರಿಗಳು ಭಾಗವಹಿಸಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ