ಟಿಪ್ಪರ್‌ಗೆ ಸ್ಕೂಟರ್ ಡಿಕ್ಕಿ; ಓರ್ವ ಸಾವು

ಭಾನುವಾರ, 1 ಜನವರಿ 2023 (19:15 IST)
ರಸ್ತೆ ಬದಿ ನಿಂತಿದ್ದ ಟಿಪ್ಪರ್‌ಗೆ ಹಿಂದಿನಿಂದ ಸ್ಕೂಟರ್ ಡಿಕ್ಕಿ ಹೊಡೆದು ಸ್ಕೂಟರ್‌ನಲ್ಲಿದ್ದ ಓರ್ವ ಸಾವನ್ನಪ್ಪಿದ್ದಾನೆ. ಈ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ನಿಡಘಟ್ಟ ಬಳಿಯ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ನಡೆದಿದೆ. ಪಶ್ಚಿಮ‌ ಬಂಗಾಳದ ಬೈಬಾದ್ ಷಾ ಮೃತ ಯುವಕ. ಹಿಂಬದಿ ಸವಾರ ವಿಜಯ್‌ಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರಗೆ ದಾಖಲಿಸಲಾಗಿದೆ. ಬೈಕ್ ಸವಾರರು ಬೆಂಗಳೂರಿಗೆ ತೆರಳುತ್ತಿದ್ದರು. ಡಿಕ್ಕಿ ಹೊಡೆದ ರಭಸಕ್ಕೆ ಸ್ಕೂಟರ್ ಟಿಪ್ಪರ್ ಲಾರಿಯಡಿ ಸಿಲುಕಿತ್ತು. ಸ್ಥಳೀಯರು ಈ ಬೈಕ್​ ಅನ್ನು ಟಿಪ್ಪರ್​ ಅಡಿಯಿಂದ ತೆಗೆದಿದು, ಹಿಂಬದಿ ಸವಾರನನ್ನು ರಕ್ಷಿಸಿದ್ದಾರೆ. ಮದ್ದೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ