ವಾರದಲ್ಲಿ 2 ದಿನ ಮದ್ಯ ಮಾರಾಟ ಮಾಡಿ ವ್ಯಸನಿಗಳ ಸಾವನ್ನು ತಪ್ಪಿಸಿ- ಎಚ್.ವಿಶ್ವನಾಥ್ ಮನವಿ

ಬುಧವಾರ, 22 ಏಪ್ರಿಲ್ 2020 (10:25 IST)

ಬೆಂಗಳೂರು : ವಾರದಲ್ಲಿ 2 ದಿನ ಮದ್ಯ ಮಾರಾಟ ಮಾಡಿ ಮದ್ಯ ವ್ಯಸನಿಗಳ ಸಾವನ್ನು ತಪ್ಪಿಸಿ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
 


 

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾರದಲ್ಲಿ 2 ದಿನ ಮದ್ಯ ಮಾರಾಟ ಅವಕಾಶ ನೀಡಿ. ವೈನ್ ಶಾಪ್, ಎಂಎಸ್ ಐಎಲ್ ಮಳಿಗೆಗಳಲ್ಲಿ ನಿಗದಿತ ಅವಧಿಯಲ್ಲಿ ಮದ್ಯ ಮಾರಾಟವಾಗಬೇಕು. ಇದರಿಂದ ವ್ಯಸನಿಗಳು ಸಾಯುವುದನ್ನು ತಪ್ಪಿಸಬಹುದು ಮಾತ್ರವಲ್ಲ ಕಾಳ ಸಂತೆಯಲ್ಲಿ ಮದ್ಯ ಮಾರಾಟವಾಗುವುದು, ಬಾರ್ ಮಾಲೀಕರೆ ತಮ್ಮ ಬಾರ್ ಗಳಲ್ಲಿ ಕಳ್ಳತನ ಮಾಡಿಸುವ ಸ್ಥಿತಿ ತಪ್ಪಿಸಿ ಎಂದು ಹೇಳಿದ್ದಾರೆ.

 

ಪಾದರಾಯನಪುರ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು,  ಇವತ್ತಿನ ದಿನಗಳಲ್ಲಿ ಸಮ್ಮಿಶ್ರ ಸರ್ಕಾರ ಇದಿದ್ದರೆ ಕರ್ನಾಟಕ ಮತ್ತೊಂದು ಅಮೇರಿಕಾ ಆಗುತ್ತಿತ್ತು. ಸಾಲು ಸಾಲು ಸಾವುಗಳಾಗುತ್ತಿತ್ತು. ಕುಮಾರಸ್ವಾಮಿ, ಸಿದ್ದರಾಮಯ್ಯ ಟ್ರಂಪ್ ಗಳಾಗುತ್ತಿದ್ದರು. ತಬ್ಲಿಘಿಗಳ ಪರ ನಿಂತು ಕರ್ನಾಟಕವನ್ನು ತಬ್ಬಲಿ ಮಾಡುತ್ತಿದ್ದರು ಎಂದು ವ್ಯಂಗ್ಯ ಮಾಡಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ