ಹಿರಿಯ ಸಾಹಿತಿ ವಿಷ್ಣು ನಾಯ್ಕ ಇನ್ನಿಲ್ಲ- ಸಿಎಂ

geetha

ಭಾನುವಾರ, 18 ಫೆಬ್ರವರಿ 2024 (14:00 IST)
ಬೆಂಗಳೂರು  : ವಯೋಸಹಜ ಖಾಯಿಲೆಗಳಿಂದಾಗಿ ವಿಷ್ಣುನಾಯ್ಕ ಅವರು ಅಸ್ವಸ್ಥಗೊಂಡಿದ್ದರು.ಉತ್ತರ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ರಂಗದ ಸಾಕ್ಷಿಪ್ರಜ್ಞೆ ಎಂದೇ ಹೆಸರಾಗಿದ್ದ ಹಿರಿಯ ಸಾಹಿತಿ ವಿಷ್ಣು ನಾಯ್ಕ (80) ನಿಧನ ಹೊಂದಿದ್ದಾರೆ.ಉಪನ್ಯಾಸಕರಾಗಿ ಹಾಗೂ ಪ್ರಾಚಾರ್ಯರಾಗಿ 43 ವರ್ಷ ಸೇವೆ ಸಲ್ಲಿಸಿದ್ದ ವಿಷ್ಣುನಾಯ್ಕ ಅವರು, ಪತ್ರಕರ್ತರಾಗಿ, ಸಾಹಿತಿಯಾಗಿ, ಗ್ರಂಥಪ್ರಕಾಶಕರಾಗಿ ಹಾಗೂ ರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದರು. ಪತ್ನಿ ಕವಿತಾ ನಾಯ್ಕ ಹಾಗೂ ಪುತ್ರಿಯರಾದ ಭಾರತಿ ಮತ್ತು ಅಮಿತಾ ಅವರನ್ನು ವಿಷ್ಣುನಾಯ್ಕರು ಅಗಲಿದ್ದಾರೆ. 

ಸಿಎಂ ಸಿದ್ದರಾಮಯ್ಯ ಅವರೂ ಸಹ ವಿಷ್ಣುನಾಯ್ಕ ಅವರ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಹಿರಿಯ ಸಾಹಿತಿ ವಿಷ್ಣು ನಾಯ್ಕ ಅವರ ನಿಧನದ ಸುದ್ದಿ ಕೇಳಿ ದು:ಖವಾಯಿತು. ವೃತ್ತಿಯಲ್ಲಿ ಶಿಕ್ಷಕರಾಗಿದ್ದ ವಿಷ್ಣು ನಾಯ್ಕ ಅವರು ಸಾಹಿತ್ಯ, ಹೋರಾಟ, ಪ್ರಕಾಶನ ಹೀಗೆ ಹಲವಾರು ಜನಮುಖಿ ಕ್ಷೇತ್ರಗಳಲ್ಲಿ ಬದುಕಿನುದ್ದಕ್ಕೂ ತಮ್ಮನ್ನು ತೊಡಗಿಸಿಕೊಂಡವರು.  ಇವರ ಅಗಲಿಕೆಯ ನೋವಿನಲ್ಲಿರುವ ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು.  ಈ ಹಿರಿಯರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಎಕ್ಸ್‌ ಖಾತೆಯಲ್ಲಿ ಸಂದೇಶ ಹಂಚಿಕೊಂಡಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ