ಬಹಮನಿ ಸುಲ್ತಾನರ ಉತ್ಸವ ಮಾಡುವುದರಲ್ಲಿ ತಪ್ಪೇನಿಲ್ಲ ಎಂದ ಮಲ್ಲಿಕಾರ್ಜುನ ಖರ್ಗೆಗೆ ಶಿಲ್ಪಾ ಗಣೇಶ್ ಕೊಟ್ಟ ಉತ್ತರವೇನು?

ಶನಿವಾರ, 17 ಫೆಬ್ರವರಿ 2018 (08:07 IST)
ಬೆಂಗಳೂರು: ಬಹಮನಿ ಸುಲ್ತಾನರ ಉತ್ಸವ ಮಾಡುವುದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದ ಸಂಸದ ಮಲ್ಲಿಕಾರ್ಜುನ ಖರ್ಗೆಗೆ ಬಿಜೆಪಿ ನಾಯಕಿ ಶಿಲ್ಪಾ ಗಣೇಶ್ ತಿರುಗೇಟು ನೀಡಿದ್ದಾರೆ.
 

ಬಹಮನಿ ಸುಲ್ತಾನರ ಉತ್ಸವ ಆಚರಿಸಲು ಹೊರಟಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ ಕೊನೆಗೆ ವಿವಾದವಾಗುತ್ತಿದ್ದಂತೆ ನಿರ್ಧಾರದಿಂದ ಹಿಂದೆ ಬಂದಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಸಂಸದ ಮಲ್ಲಿಕಾರ್ಜುನ ಖರ್ಗೆ ಉತ್ಸವ ಮಾಡುವುದು ತಪ್ಪಲ್ಲ ಎಂದಿದ್ದರು.

ಇದಕ್ಕೆ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿದ ಶಿಲ್ಪಾ ಗಣೇಶ್, ಅಪ್ಪನ ತಿಥಿ ಕಾರ್ಯ ಮಕ್ಕಳು ಮಾಡಿದರೆ ತಪ್ಪಿಲ್ಲ. ಊರಿನವರಿಗೂ ಮಾಡಿ ಎನ್ನುವುದು ತಪ್ಪು. ನಿಮಗೆ ಬೇಕಿದ್ದರೆ ಉತ್ಸವ ಮಾಡಿಕೊಳ್ಳಿ. ಜನರ ದುಡ್ಡು ಖರ್ಚು ಮಾಡಬೇಡಿ ಅಷ್ಟೇ ಎಂದು ಶಿಲ್ಪಾ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ