ಕಾಂಗ್ರೆಸ್ ನ ಮೂರೂ ಬಿಟ್ಟವರು ಕಾಮೆಂಟ್ ಗೆ ಬಿಜೆಪಿ ತಿರುಗೇಟು

ಭಾನುವಾರ, 18 ಮಾರ್ಚ್ 2018 (09:12 IST)
ಬೆಂಗಳೂರು: ಬಿಜೆಪಿ ಏಕೈಕ ಬಾರಿ ಕರ್ನಾಟಕದಲ್ಲಿ ಅಧಿಕಾರಕ್ಕೇರಿದ್ದರೂ ಒಂದೇ ಅವಧಿಯಲ್ಲಿ ಮೂರು ಮೂರು ಮುಖ್ಯಮಂತ್ರಿಗಳನ್ನು ಕಂಡಿದ್ದಕ್ಕೆ ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿ ಟಾಂಗ್ ಕೊಟ್ಟಿದೆ.
 

ಮೂರೂ ಬಿಟ್ಟವರು ಬಿಜೆಪಿಗೆ ದೊಡ್ಡವರು ಎಂದು ಕರ್ನಾಟಕ ಕಾಂಗ್ರೆಸ್ ಬಿಎಸ್ ಯಡಿಯೂರಪ್ಪ,  ಜಗದೀಶ್ ಶೆಟ್ಟರ್ ಮತ್ತು ಸದಾನಂದ ಗೌಡರ ಚಿತ್ರ ಹಾಕಿ ಲೇವಡಿ ಮಾಡಿತ್ತು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕಿ ಶಿಲ್ಪಾ ಗಣೇಶ್, ಎಲ್ಲಾ ಬಿಟ್ಟೋರು ಕಾಂಗ್ರೆಸ್ ನಲ್ಲಿ ದೊಡ್ಡೋರು. ಬೇರೆಯವರ ಮೇಲೆ ಆರೋಪ ಮಾಡುವವರು ಕಾಂಗ್ರೆಸ್ ನ ದಡ್ಡರು. ಈಗಾಗಲೇ 21 ರಾಜ್ಯಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ಅದಕ್ಕೇ ತಾನು ಮಾತ್ರ ಸರಿ, ಊರಲ್ಲಿ ಇರೋರೆಲ್ಲಾ ಸರಿಯಿಲ್ಲ ಎಂದು ಕೂಗಾಡುತ್ತಿದ್ದಾರೆ ಎಂದು ಟ್ವಿಟರ್ ಮೂಲಕವೇ ತಿರುಗೇಟು ಕೊಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ