ಟಿಶ್ಯೂ ಪೇಪರ್ ಕೇಳಿದ್ದಕ್ಕೆ ಚಾಕುವಿನಿಂದ ಇರಿತ

ಭಾನುವಾರ, 29 ಅಕ್ಟೋಬರ್ 2023 (13:00 IST)
ರಾಯಚೂರು: ಡಾಬಾಗೆ ಬಂದಿದ್ದ ಯುವಕರು ಮಾಲಿಕನ ಬಳಿ ಟಿಶ್ಯೂ ಪೇಪರ್ ಕೇಳಿದ್ದಕ್ಕೆ ಚಾಕುವಿನಿಂದ ಇರಿದು ಹಲ್ಲೆ ಮಾಡಿದ ಘಟನೆ ನಡೆದಿದೆ.

ಡಾಬಾದಲ್ಲಿ ಪಾನ್ ಶಾಪ್ ಮಾಲಿಕ ವೀರೇಶ್ ಟೇಬಲ್ ಬಳಿ ಬಂದ ಇಬ್ಬರು ಯುವಕರು ವೈಟರ್ ಎಂದು ತಪ್ಪು ತಿಳುವಳಿಕೆಯಿಂದ ಟಿಶ್ಯೂ ಪೇಪರ್ ತೆಗೆದುಕೊಂಡು ಬರಲು ಹೇಳಿದ್ದಾರೆ. ಈ ವೇಳೆ ಇಬ್ಬರ ನಡುವೆ ವಾಗ್ವಾದವಾಗಿದೆ.

ಇದೇ ಸಂದರ್ಭದಲ್ಲಿ ವೀರೇಶ್ ಇಬ್ಬರು ಯುವಕರ ಮೇಲೆ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾರೆ. ಇದೀಗ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ