ನರೇಂದ್ರ ಮೋದಿಗೆ ಸವಾಲ್ - ಲಕ್ಷ ಕೋಟಿ ಪರಿಹಾರ ಕೇಳಿದ ಸಿದ್ದರಾಮಯ್ಯ

ಮಂಗಳವಾರ, 7 ಜನವರಿ 2020 (13:48 IST)

ನೆರೆ ಪರಿಹಾರ ಎರಡನೇ ಹಂತದಲ್ಲಿ ಬಿಡುಗಡೆ ಮಾಡಿರೋ ಪ್ರಧಾನಿಗೆ ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸವಾಲ್ ಹಾಕಿದ್ದಾರೆ.
 

ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ನೆರೆ ಹಾನಿ ಪ್ರಮಾಣ 1 ಲಕ್ಷ ಕೋಟಿಗಿಂತ ಹೆಚ್ಚಿದೆ. ರಾಜ್ಯ ಸರಕಾರ ಪರಿಹಾರವಾಗಿ ಕೇಳಿದ್ದು 38 ಸಾವಿರ ಕೋಟಿ. ಆದರೆ ಉಳಿದ ಪರಿಹಾರ ಹಣ ಬರೋದು ಯಾವಾಗ ಅಂತ ಕೇಂದ್ರ ಸರಕಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಕೇಳಿದ್ದಾರೆ.

ಮೊದಲ ಹಾಗೂ ಎರಡನೇ ಹಂತದಲ್ಲಿ ಈವರೆಗೆ 3,069 ಕೋಟಿ ಬಂದಿದೆ. ಆದರೆ ಸಿಎಂ ಕೇಳಿರೋ ಪರಿಹಾರ ಹಣವನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು ಒತ್ತಾಯ ಮಾಡಿದ್ದಾರೆ.

ನೆರೆ ಪರಿಹಾರ ಬಿಡುಗಡೆ ಮಾಡಿರೋ ಪ್ರಧಾನಿಗೆ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ