ಸಿದ್ದರಾಮಯ್ಯನವರೇ ಯಾವುದೇ ಕಾರಣಕ್ಕೂ ಡಿಕೆಶಿ ಕೈಗೆ ಕರ್ನಾಟಕವನ್ನು ನೀಡಬೇಡಿ: ಬಸನಗೌಡ ಪಾಟೀಲ್

Sampriya

ಮಂಗಳವಾರ, 24 ಜೂನ್ 2025 (19:53 IST)
ವಿಜಯಪುರ: ಸಿದ್ದರಾಮಯ್ಯನವರೇ ನಿಮಗೆ ನಿಭಾಯಿಸಲು ಸಾಧ್ಯವಾಗದಿದ್ದರೆ, ವಿಧಾನಸಭೆ ವಿಸರ್ಜನೆ ಮಾಡಿ.  ಆದರೆ ತಪ್ಪಿಯೂ ಕರ್ನಾಟಕವನ್ನ ಡಿಕೆ ಶಿವಕುಮಾರ್‌ ಕೈಗೆ ಕೊಡಬೇಡಿ. ಒಂದು ವೇಳೆ ಕೊಟ್ರೇ ಅವರು ಮಾರಿಯೇ ಬಿಡ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್  ಯತ್ನಾಳ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಎಲ್ಲ ಶಾಸಕರು ರೊಚ್ಚಿಗೆದ್ದು,  ಸದ್ಯ ಸಿಎಂ ಲೂಟಿಗೆ ಇಳಿದಿದ್ದಾರೆ. ಸಿಎಂ ಡೀಲಿಂಗ್‌ನ್ನು ಅವರ ಮಗ ಮಾಡ್ತಿದ್ದಾನೆ, ಬೈರತಿ ಸುರೇಶ್ ಅವರು ಡೀಲಿಂಗ್ ಮಾಡುತ್ತಾರೆ.  ಡಿಕೆಶಿ ಸಹೋದರರು ಸೇರಿಕೊಂಡು ಲೂಟಿ ಮಾಡುತ್ತಿದ್ದಾರೆ. 

ಈ ಹಿನ್ನೆಲೆ ಸರ್ಕಾರ ಯಾವಾಗ ಬೀಳುತ್ತೆ ಎಂದು ಹೇಳಕ್ಕಾಗಲ್ಲ. ಹಾಗಾಗಿ ಅಷ್ಟರಲ್ಲಿ ಎಷ್ಟು ದುಡ್ಡು ಆಗುತ್ತೋ ಅಷ್ಟು ಲೂಟಿ ಮಾಡಲು ಮಂತ್ರಿಗಳು ಮುಂದಾಗಿದ್ದಾರೆ ಎಂದು ಆರೋಪಿಸಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ